ಕಾರವಾರ: ನಗರದ ಸೋನಾರವಾಡದ ಗದ್ದೆಯಲ್ಲಿ ಸೋಮವಾರ ಬೆಳಿಗ್ಗೆ ಮೇಯುತ್ತಿದ್ದ ಎಮ್ಮೆ ಕರುವನ್ನು ಎಂಟೂವರೆ ಅಡಿ ಉದ್ದದ ಹೆಬ್ಬಾವು ನುಂಗಲು ಪ್ರಯತ್ನಿಸಿತು. ಹಾವಿನ ಬಾಯಿಯಿಂದ ಬಿಡಿಸಿಕೊಳ್ಳಲು ಕರು ಒದ್ದಾಡಿ, ಮೃತಪಟ್ಟಿತು.
ಹೆಬ್ಬಾವಿನ ಬಿಗಿಯಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಕರು ಬಹಳ ಪ್ರಯತ್ನ ಪಟ್ಟಿತು. ಅದರ ತಾಯಿ ಕೂಡ ಗಾಬರಿಯಿಂದ ಓಡಾಡುತ್ತಿತ್ತು. ಸುತ್ತಮುತ್ತ ಹೋಗುತ್ತಿದ್ದವರಿಗೆತನ್ನ ಕರುವಿಗೆ ಎದುರಾದ ಸ್ಥಿತಿಯನ್ನು ತನ್ನದೇ ರೀತಿಯಲ್ಲಿ ಹೇಳಲು ಪ್ರಯತ್ನಿಸಿತು. ಸ್ಥಳೀಯರು ಸಮೀಪಕ್ಕೆ ಬಂದು ನೋಡುವಷ್ಟರಲ್ಲಿ ಕರುವಿನ ಉಸಿರು ನಿಂತಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಬಂದಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಬ್ಬಾವಿನ ಬಾಯಿಯಿಂದ ಕರುವಿನ ಕಳೇಬರವನ್ನು ಬೇರ್ಪಡಿಸಿ, ಹಾವನ್ನು ಕಾಡಿಗೆ ಬಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.