ADVERTISEMENT

ಶಿರಸಿ: ಉಪವಿಭಾಗಾಧಿಕಾರಿ ದೇವರಾಜ ನೇಮಕ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 14:57 IST
Last Updated 19 ಜನವರಿ 2022, 14:57 IST
ಆರ್.ದೇವರಾಜ
ಆರ್.ದೇವರಾಜ   

ಶಿರಸಿ: ಇಲ್ಲಿನ ಉಪವಿಭಾಗಾಧಿಕಾರಿಯಾಗಿ ನೆರೆಯ ಸೊರಬ ತಾಲ್ಲೂಕಿನ ಹಾಲಗಳಲೆ ಮೂಲದ ಕೆ.ಎ.ಎಸ್. ಅಧಿಕಾರಿ ಆರ್.ದೇವರಾಜ ನೇಮಕಗೊಂಡಿದ್ದಾರೆ.

ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಇವರು 2019ರ ಕೆ.ಎ.ಎಸ್. ಬ್ಯಾಚಿನ ಅಧಿಕಾರಿ. ಇದಕ್ಕೂ ಮುನ್ನ ಹಾಸನದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕೃಷಿ ಕುಟುಂಬದ ಹಿನ್ನೆಲೆಯ ದೇವರಾಜ ಅವರು ಈ ಹಿಂದೆ ಸಿದ್ದಾಪುರದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಕೆಪಿಎಸ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಕೆ.ಎ.ಎಸ್. ಅಧಿಕಾರಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.