ADVERTISEMENT

ಮನೆ ಮೇಲೆ ಕುಸಿದ ಗುಡ್ಡ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 18:14 IST
Last Updated 23 ಜುಲೈ 2021, 18:14 IST
ಮಳೆಗೆ ಕುಸಿದು ಬದ್ದಿರುವ ಮನೆ
ಮಳೆಗೆ ಕುಸಿದು ಬದ್ದಿರುವ ಮನೆ    

ಯಲ್ಲಾಪುರ: ತಾಲ್ಲೂಕಿನ ಕಳಚೆಯಲ್ಲಿ ಶುಕ್ರವಾರ ಮನೆ ಮೇಲೆ ಗುಡ್ಡ ಕುಸಿದು ದೇವಕಿ ನಾರಾಯಣ ಗಾಂವ್ಕರ (48) ಎಂಬುವವರು ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಇಬ್ಬರು ಮಕ್ಕಳು ಮತ್ತು ಮೂವರು ದೊಡ್ಡವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರ ದೇಹವನ್ನು ಶುಕ್ರವಾರ ಸಂಜೆ ಊರವರೆಲ್ಲ ಸೇರಿ ಹೊರತೆಗೆದಿದ್ದಾರೆ. ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಸ್ಥಳಕ್ಕೆ ಐದು ಕಿಲೋಮೀಟರ್ ನಡೆದುಕೊಂಡು ಹೋಗಿ ಪರಿಶೀಲನೆ ನಡೆಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ವ್ಯಕ್ತಿ ಕಾಣೆ: ತಾಲ್ಲೂಕಿನ ಹಾಸಣಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಾಡದ ಕಬ್ಬಿನಗದ್ದೆ ಸೇತುವೆ ದಾಟುತ್ತಿದ್ದ ಆನಂದ ನಾಗಾ ಮೊಗೇರ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರಿಗೆ ಹುಡುಕಾಟ ಮುಂದುವರಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.