ADVERTISEMENT

ರಾಮರಾಜ್ಯಕ್ಕಾಗಿ ಆಪರೇಷನ್‌ ಕಮಲಕ್ಕೂ ಸಿದ್ಧ: ನಳಿನ್ ಕುಮಾರ್‌ ಕಟೀಲ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 20:59 IST
Last Updated 28 ಜುಲೈ 2020, 20:59 IST
ನಳಿನ್ ಕುಮಾರ್‌ ಕಟೀಲ್‌
ನಳಿನ್ ಕುಮಾರ್‌ ಕಟೀಲ್‌   

ಯಲ್ಲಾಪುರ: ‘ಮಹಾತ್ಮ ಗಾಂಧಿ ಕನಸಿನ ರಾಮರಾಜ್ಯದ ಪರಿಕಲ್ಪನೆ ಸಾಕಾರವಾಗಬೇಕಾದರೆ, ಗ್ರಾಮ ಸ್ವರಾಜ್ಯವಾಗಬೇಕು. ಪ್ರತಿಯೊಬ್ಬನೂ ರಾಮನಾಗಬೇಕು. ಈ ಕನಸನ್ನು ಸಾಕಾರಗೊಳಿಸಲು ಅಧಿಕಾರ ಬೇಕು. ಅದಕ್ಕಾಗಿ ಸಂಖ್ಯಾಬಲ ಕಡಿಮೆ ಇದ್ದಾಗ ಆಪರೇಷನ್ ಕಮಲದಂತಹ ತಂತ್ರಗಾರಿಕೆಗೂ ಪಕ್ಷ ಸಿದ್ಧವಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹೇಳಿದರು.

ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ ಎಂಎಲ್‌ಸಿ ಶಾಂತಾರಾಮ ಸಿದ್ದಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಕುಟುಂಬ ರಾಜಕಾರಣ, ತಮ್ಮ ಮಕ್ಕಳೇ ಮಂತ್ರಿ, ಮುಖ್ಯಮಂತ್ರಿಗಳಾಗಬೇಕೆಂಬ ವ್ಯಾಮೋಹ, ಮಂತ್ರಿಗಿರಿಗಾಗಿ ಒಬ್ಬರು ಮತ್ತೊಬ್ಬರ ಕಾಲೆಳೆಯುತ್ತಿರುವ ಕಾಲಘಟ್ಟವಿದು. ಗ್ರಾಮಸ್ವರಾಜ್ಯದ ಕಲ್ಪನೆಯಿಂದ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಶಾಂತಾರಾಮ ಸಿದ್ದಿ ಅವರಂತಹ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿಕೊಡುವ ಮೂಲಕ ಬಿಜೆಪಿ ಉತ್ತಮ ಸಂದೇಶ ನೀಡಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.