ಶಿರಸಿ: ಸಾಹಿತಿ ಗಿರೀಶ್ ಕಾರ್ನಾಡ್ ಅವರು 6ರಿಂದ 9ನೇ ತರಗತಿಯವರೆಗೆ ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದವರು.
ಅವರಿಗೆ ಅಸಾಧ್ಯ ಸ್ಮರಣ ಶಕ್ತಿಯಿತ್ತು. ಆಗಲೇ ಅವರಿಗೆ ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಇತ್ತು. ಗಣಿತ ಕೂಡ ಅವರ ಆಸಕ್ತಿಯ ವಿಷಯವಾಗಿತ್ತು ಎಂಬುದನ್ನು ನೆನಪಿಸಿಕೊಂಡರು ಅವರ ಹೈಸ್ಕೂಲ್ ಸಹಪಾಠಿ, ವಕೀಲ ಡಿ.ಎನ್.ಹೆಗಡೆ ಹಾಲೇರಿಕೊಪ್ಪ.
ಇದನ್ನೂ ಓದಿ:ಇಲ್ಲಿ ಸರ್ಕಾರಿ ಶಾಲೆಗೂ ಕ್ಯೂ ನಿಲ್ತಾರೆ ಕಣ್ರೀ...!
'ನಾನು ಅವರು ಒಟ್ಟಿಗೆ ಒಂದೇ ಬೇಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮನೆ ಅವರು ನಿತ್ಯವೂ ಬರುತ್ತಿದ್ದರು. ಆದರೆ, ಇತ್ತೀಚೆಗೆ ಭೇಟಿಯಾಗದೇ ಆರೆಂಟು ವರ್ಷಗಳಾದವು' ಎಂದು ಅವರ ಇನ್ನೊಬ್ಬ ಸಹಪಾಠಿ ವಿನಾಯಕ ಬಾರ್ಕೂರ್ ಸ್ಮರಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.