ಗೋಕರ್ಣ: ಇಲ್ಲಿಯ ಮೇಲಿನಕೇರಿಯಲ್ಲಿರುವ ಮಾರುತಿ ಕಟ್ಟೆಯಲ್ಲಿ ನೂತನ ಶಿಲಾಮಯ ಗರ್ಭಗುಡಿಯಲ್ಲಿ, ಪುರಾತನ ಪ್ರಸಿದ್ಧ ಮಾರುತಿ ಮೂರ್ತಿಯ ಪುನರ್ ಪ್ರತಿಷ್ಠಪನಾ ಕಾರ್ಯ ವಿಜೃಂಭಣೆಯಿಂದ ಗುರುವಾರ ಮುಕ್ತಾಯವಾಯಿತು.
ದೇವರ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯ ಜೂನ್ 6ರಿಂದಲೇ ಆರಂಭವಾಗಿತ್ತು. ವೇ. ಗಣಪತಿ ಗಜಾನನ ಹಿರೇ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಿತು.
ಗುರುವಾರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಮಾರುತಿ ದೇವಸ್ಥಾನದ ಆಡಳಿತ ಸಮಿತಿ ಈ ಎಲ್ಲ ಕಾರ್ಯಗಳನ್ನೂ ಆಯೋಜಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.