ADVERTISEMENT

ಶಿರಸಿ: ಟಿಎಂಎಸ್ ಸುಪರ್ ಮಾರ್ಟ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 17:13 IST
Last Updated 27 ಜುಲೈ 2021, 17:13 IST
ಶಿರಸಿಯ ಟಿ.ಎಂ.ಎಸ್. ಸಂಸ್ಥೆ ಆರಂಭಿಸಿರುವ ಸುಪರ್ ಮಾರ್ಟ್ಅನ್ನು ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ಉದ್ಘಾಟಿಸಿದರು
ಶಿರಸಿಯ ಟಿ.ಎಂ.ಎಸ್. ಸಂಸ್ಥೆ ಆರಂಭಿಸಿರುವ ಸುಪರ್ ಮಾರ್ಟ್ಅನ್ನು ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ಉದ್ಘಾಟಿಸಿದರು   

ಶಿರಸಿ: ‘ರೈತರ, ಜನಸಾಮಾನ್ಯರ ಆಶೋತ್ತರಕ್ಕೆ ಸ್ಪಂದಿಸುವ ದಿಶೆಯಲ್ಲಿ ಕೆಲಸ ಮಾಡುವುದು ಸಹಕಾರ ಸಂಸ್ಥೆಯ ಧ್ಯೇಯ. ಅದನ್ನು ಶಿರಸಿಯ ಟಿ.ಎಂ.ಎಸ್. ಉತ್ತಮವಾಗಿ ನಿಭಾಯಿಸುತ್ತಿದೆ’ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಟಿ.ಎಂ.ಎಸ್.ಸಂಸ್ಥೆ ಆರಂಭಿಸಿದ ‘ಸುಪರ್ ಮಾರ್ಟ್’ನ್ನು ಮಂಗಳವಾರ ಉದ್ಘಾಟಿಸಿದ ಅವರು, ‘ಸದಸ್ಯರ ಶ್ರೇಯೋಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕಾಲಕ್ಕೆ ತಕ್ಕಂತೆ ಸಂಸ್ಥೆ ಉತ್ತಮ ಯೋಜನೆ ರೂಪಿಸಿಕೊಂಡಿದೆ. ನಿರಂತರತೆ ಕಾಯ್ದುಕೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ’ ಎಂದರು.

‘ಜಿಲ್ಲೆಯ ಸಹಕಾರ ಸಂಸ್ಥೆಗಳ ಆದರ್ಶ, ಪ್ರಾಮಾಣಿಕತೆ ದೇಶದಲ್ಲೇ ಮಾದರಿಯಾಗಿದೆ. ರೈತರ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸುವ ಜತೆಗೆ ರೈತರಿಗೆ ಅಗತ್ಯ ವಸ್ತುಗಳನ್ನು ಕಡಿಮೆ ದರದಲ್ಲಿ ಒದಗಿಸಿಕೊಡುವ ಪ್ರಯತ್ನವೂ ಮಾದರಿ’ ಎಂದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸಂಸ್ಥೆಯ ಉಪಾಧ್ಯಕ್ಷ ಎಂ.ಪಿ.ಹೆಗಡೆ ಹೊನ್ನೆಕಟ್ಟಾ, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕ ಎಂ.ಎ.ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.