ಕಾರವಾರ: ತಾಲ್ಲೂಕಿನ ವಿರ್ಜೆ ಗ್ರಾಮದಲ್ಲಿಕದ್ರಾಜಲಾಶಯದಹಿನ್ನೀರಿನಲ್ಲಿ ಭಾನುವಾರ ಈಜುತ್ತಿದ್ದಾಗನೀರುಪಾಲಾಗಿದ್ದ ಯುವಕ ಮಂಜುನಾಥ ಸುರೇಶ ಪಾಗಿ (24) ಅವರ ಮೃತದೇಹವು ಸೋಮವಾರ ಪತ್ತೆಯಾಗಿದೆ.
ಅವರು ಮಧ್ಯಾಹ್ನ 12.30ರ ಸುಮಾರಿಗೆ ತನ್ನ ಗೆಳೆಯರ ಜೊತೆ ನದಿಯ ದಡಕ್ಕೆ ತೆರಳಿದ್ದರು. ನದಿಯಲ್ಲಿ ಸುಮಾರು 40 ಮೀಟರ್ಗಳಷ್ಟು ದೂರ ಈಜುತ್ತ ಸಾಗಿದ್ದ ಅವರು, ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಿದ್ದರು. ಜೊತೆಗಿದ್ದವರು ರಕ್ಷಿಸಲು ಮುಂದಾದರೂ ಸಾಧ್ಯವಾಗಲಿಲ್ಲ.ಮುಖ್ಯರಸ್ತೆಯಿಂದ ಸುಮಾರು ಒಂದು ಕಿಲೋಮೀಟರ್ ಒಳಗಿರುವನಿರ್ಜನಪ್ರದೇಶದಲ್ಲಿ ಅವಘಡ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐ.ಟಿ.ಐ ವಿದ್ಯಾಭ್ಯಾಸ ಮಾಡಿದ್ದ ಮಂಜುನಾಥ, ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ನಾಲ್ಕು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.
ಸ್ಥಳಕ್ಕೆ ಮಲ್ಲಾಪುರ ಪೊಲೀಸ್ ಠಾಣೆ ಪಿ.ಎಸ್.ಐ ವಿಜಯಲಕ್ಷ್ಮಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.