ADVERTISEMENT

ಬನದ ಹುಣ್ಣಿಮೆ; ದೇವಿಗೆ ಸೀರೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 15:07 IST
Last Updated 17 ಜನವರಿ 2022, 15:07 IST
ಬನದ ಹುಣ್ಣಿಮೆ ಪ್ರಯುಕ್ತ ಸೋಮವಾರ ಹೊಸಪೇಟೆಯ ದೇವಾಂಗಪೇಟೆ ಬನಶಂಕರಿ ದೇವಸ್ಥಾನದಲ್ಲಿ ದೇವಿಯನ್ನು ಅಲಂಕರಿಸಿ ಮೆರವಣಿಗೆ ಮಾಡಲಾಯಿತು
ಬನದ ಹುಣ್ಣಿಮೆ ಪ್ರಯುಕ್ತ ಸೋಮವಾರ ಹೊಸಪೇಟೆಯ ದೇವಾಂಗಪೇಟೆ ಬನಶಂಕರಿ ದೇವಸ್ಥಾನದಲ್ಲಿ ದೇವಿಯನ್ನು ಅಲಂಕರಿಸಿ ಮೆರವಣಿಗೆ ಮಾಡಲಾಯಿತು   

ಹೊಸಪೇಟೆ (ವಿಜಯನಗರ): ಬನದ ಹುಣ್ಣಿಮೆ ಪ್ರಯುಕ್ತ ಬನಶಂಕರಿ ಯುವಕರ ಸಂಘದ ಸದಸ್ಯರು ಸೋಮವಾರ ಹಂಪಿ ಗಾಯತ್ರಿ ಪೀಠದಲ್ಲಿ ಪೂಜೆ ನೆರವೇರಿಸಿದರು.

ನಂತರ ಪೂಜೆ ಮಾಡಿದ ಸೀರೆಯನ್ನು ತಲೆ ಮೇಲೆ ಹೊತ್ತುಕೊಂಡು ನಗರದ ವರೆಗೆ ಪಾದಯಾತ್ರೆ ಕೈಗೊಂಡರು. ಬಳಿಕ ದೇವಾಂಗಪೇಟೆ ಬನಶಂಕರಿ ದೇವಸ್ಥಾನದಲ್ಲಿ ದೇವಿಗೆ ಸೀರೆ ತೊಡಿಸಿ ವಿಶೇಷ ಪೂಜೆ ನೆರವೇರಿಸಿದರು. ನಂತರ ದೇಗುಲದ ಆವರಣದಲ್ಲಿ ಬನಶಂಕರಿ ದೇವಿ ಮೆರವಣಿಗೆ ಜರುಗಿತು. ಬೆರಳೆಣಿಕೆ ಜನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT