ADVERTISEMENT

‘ಐಸೋಲೇಷನ್‌ನಲ್ಲಿರುವವರು ಹೊರಗೆ ಬರದಿರಿ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 12:36 IST
Last Updated 20 ಏಪ್ರಿಲ್ 2021, 12:36 IST
ತಹಶೀಲ್ದಾರ್‌ ಎಚ್‌. ವಿಶ್ವನಾಥ್, ಕಂದಾಯ ಇಲಾಖೆಯ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನಗೌಡ ಅವರು ಮಂಗಳವಾರ ಹೊಸಪೇಟೆಯ ಎಂ.ಜೆ. ನಗರದ ಮನೆಯೊಂದರಲ್ಲಿ ಐಸೋಲೇಷನ್‌ಲಿರುವ ವ್ಯಕ್ತಿಗೆ ಹೊರಗೆ ಓಡಾಡದಂತೆ ಸೂಚಿಸಿದರು
ತಹಶೀಲ್ದಾರ್‌ ಎಚ್‌. ವಿಶ್ವನಾಥ್, ಕಂದಾಯ ಇಲಾಖೆಯ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನಗೌಡ ಅವರು ಮಂಗಳವಾರ ಹೊಸಪೇಟೆಯ ಎಂ.ಜೆ. ನಗರದ ಮನೆಯೊಂದರಲ್ಲಿ ಐಸೋಲೇಷನ್‌ಲಿರುವ ವ್ಯಕ್ತಿಗೆ ಹೊರಗೆ ಓಡಾಡದಂತೆ ಸೂಚಿಸಿದರು   

ಹೊಸಪೇಟೆ (ವಿಜಯನಗರ): ಕೋವಿಡ್‌–19 ದೃಢಪಟ್ಟ ನಂತರ ಮನೆಯಲ್ಲೇ ಐಸೋಲೇಷನ್‌ನಲ್ಲಿ ಇರುವವರು ಹೊರಗೆ ಬರದಂತೆ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಸೂಚಿಸಿದರು.

ಇಲ್ಲಿನ ಎಂ.ಜೆ. ನಗರ, ಬಸವೇಶ್ವರ ಬಡಾವಣೆ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಹೋಂ ಐಸೋಲೇಷನ್‌ನಲ್ಲಿರುವವರ ಮನೆಗಳಿಗೆಮಂಗಳವಾರ ಭೇಟಿ ನೀಡಿದರು.

‘ಕೋವಿಡ್‌ ದೃಢಪಟ್ಟ ನಂತರ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿವೆ. ಐಸೋಲೇಷನ್‌ ಅವಧಿ ಮುಗಿದು, ಪರೀಕ್ಷೆ ಬಳಿಕ ನೆಗೆಟಿವ್‌ ವರದಿ ಬರುವ ತನಕ ಯಾರೂ ಹೊರಗೆ ಓಡಾಡಬಾರದು. ಒಂದುವೇಳೆ ನಿಯಮ ಉಲ್ಲಂಘಿಸಿ ಹೊರಗೆ ಬಂದರೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ವಿಶ್ವನಾಥ್‌ ಎಚ್ಚರಿಕೆ ನೀಡಿದರು.

ADVERTISEMENT

ಕಂದಯ ಇಲಾಖೆಯ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನಗೌಡ, ಆಶಾ, ಆರೋಗ್ಯ ಕಾರ್ಯಕರ್ತರು ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.