ADVERTISEMENT

ಮಳೆ ಕಾಟ: ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗವಾಗಿ ಸಮಾವೇಶಕ್ಕೆ ಸಿಎಂ

​ಪ್ರಜಾವಾಣಿ ವಾರ್ತೆ
Published 20 ಮೇ 2025, 6:11 IST
Last Updated 20 ಮೇ 2025, 6:11 IST
<div class="paragraphs"><p>ಹೊಸಪೇಟೆಯಲ್ಲಿ&nbsp;ಮಳೆ ಕಾಟ</p></div>

ಹೊಸಪೇಟೆಯಲ್ಲಿ ಮಳೆ ಕಾಟ

   

ಹೊಸಪೇಟೆ: ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷವಾಗಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಇಂದು ನಡೆಯುತ್ತಿರುವ ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಮಳೆ ಅಡ್ಡಿಯಾಗಿದೆ.

ಒಂದು ಕಡೆ ಹವಾಮಾನ ವೈಪರೀತ್ಯದಿಂದ ಸಿಎಂ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್ ಸೇವೆ ಸಿಗದೇ ರಸ್ತೆ ಮಾರ್ಗವಾಗಿ ಹೊಸಪೇಟೆಗೆ ಬರುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮ ಆರಂಭವಾಗುವುದು ತಡವಾಗಿದೆ.

ADVERTISEMENT

ಇನ್ನೊಂದೆಡೆ, ಸಮಾವೇಶಕ್ಕೆ ಬರಬೇಕಿದ್ದ ಜನರಿಗೆ ಮಳೆ ಅಡ್ಡಿಯಾಯಿತು. ಸಮಾವೇಶ ನಡೆಯುವ ಕ್ರೀಡಾಂಗಣ ಸುತ್ತ ಜನ ಮರ, ಅಂಗಡಿ, ಮಳಿಗೆಗಳ ಎದುರು ಆಶ್ರಯ ಪಡೆದಿದ್ದಾರೆ.

ಆದರೆ ಸಮಾವೇಶದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸರ್ಕಾರ ಬಂದು ಎರಡು ವರ್ಷವಾಗಿರುವ ಸಂದರ್ಭದಲ್ಲಿ ರಾಜ್ಯದಾದ್ಯಂತ ಮಳೆಯಾಗುತ್ತಿರುವುದು ನಮ್ಮ ಸೌಭಾಗ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.