ADVERTISEMENT

ವಿಜಯನಗರ: ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಗೌರವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 14:17 IST
Last Updated 6 ಡಿಸೆಂಬರ್ 2022, 14:17 IST
ಹೊಸಪೇಟೆಯ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ಬಾಬಾಸಾಹೇಬ್‌ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು
ಹೊಸಪೇಟೆಯ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ಬಾಬಾಸಾಹೇಬ್‌ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು   

ಹೊಸಪೇಟೆ (ವಿಜಯನಗರ): ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಗರದಲ್ಲಿನ ಅವರ ಪ್ರತಿಮೆಗೆ ಮಂಗಳವಾರ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು.

ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌., ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ನಗರಸಭೆ ಅಧ್ಯಕ್ಷೆ ಸುಂಕಮ್ಮ ಸೇರಿದಂತೆ ಹಲವರು ಗೌರವ ಸಲ್ಲಿಸಿದರು.

ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘ, ಮಾನವ ಬಂಧುತ್ವ ವೇದಿಕೆ, ಛಲವಾದಿ ಮಹಾಸಭಾದ ಮುಖಂಡರು ಸಹ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಮುಖಂಡರಾದ ಸೋಮಶೇಖರ್‌ ಬಣ್ಣದಮನೆ, ಎಂ.ಸಿ. ವೀರಸ್ವಾಮಿ, ಮಾರೆಣ್ಣ, ರಾಮಚಂದ್ರ, ಯೋಹಾನ್, ಮಾರುತಿ ಕಾಂಬ್ಳೆ, ಕಾರಿಗನೂರು ರಾಮಕೃಷ್ಣ, ಆನಂದ್, ಶರಣಪ್ಪ, ಪ್ರಕಾಶ್, ನೀಲಕಂಠ, ಮಂಜುನಾಥ್, ಜೆ.ಸಿ. ಈರಣ್ಣ, ಯಲ್ಲಪ್ಪ, ರಮೇಶ, ಮರಿಯಪ್ಪ, ಮುದುಕಪ್ಪ, ಹುಲುಗಪ್ಪ, ಮೌಲ, ಈಶ್ವರ, ಕೊಟ್ರೇಶ್, ಗೋವಿಂದರಾಜ್ ಇತರರಿದ್ದರು.

ADVERTISEMENT

ತಾಲ್ಲೂಕಿನ ಕಮಲಾಪುರದಲ್ಲೂ ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಲಾಯಿತು. ಹಂಪಿ ನೂತನ ಸಿಪಿಐ ಶಿವರಾಜ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದ ಹೆಗೆಡೆ, ಮಲ್ಲಿಕಾರ್ಜುನ, ಶಿವರಾಮ, ಸೌಕರಪ್ಪ, ಮೆಟ್ರಿ ರಾಮಂಜಿನಿ, ಹುಲುಗಪ್ಪ, ದೇವಪ್ರಿಯ, ತಿಪ್ಪೇಸ್ವಾಮಿ, ಮುಖ್ಯಾಧಿಕಾರಿ ನಾಗೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್‌ ಅಮಾನುಲ್ಲಾ ಸೇರಿದಂತೆ ಹಲವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.