ADVERTISEMENT

ವಿಜಯನಗರ: ವಿಶ್ವಾಸಾರ್ಹತೆ ಮೊದಲ ಆದ್ಯತೆ -ಎಂ.ಬಿ. ಲಿಂಗದಳ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 15:33 IST
Last Updated 3 ಆಗಸ್ಟ್ 2021, 15:33 IST
ಹೊಸಪೇಟೆಯಲ್ಲಿ ಸೋಮವಾರ ಶಿವಸಂಗಮ ಚಿಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ವಾರ್ಷಿಕೋತ್ಸವವನ್ನು ನಿರ್ದೇಶಕ ಎಂ.ಬಿ. ಲಿಂಗದಳ ಉದ್ಘಾಟಿಸಿದರು
ಹೊಸಪೇಟೆಯಲ್ಲಿ ಸೋಮವಾರ ಶಿವಸಂಗಮ ಚಿಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ವಾರ್ಷಿಕೋತ್ಸವವನ್ನು ನಿರ್ದೇಶಕ ಎಂ.ಬಿ. ಲಿಂಗದಳ ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ‘ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸಿ, ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮೊದಲ ಆದ್ಯತೆ ಆಗಬೇಕು’ ಎಂದು ಶಿವಸಂಗಮ ಚಿಟ್ಸ್‌ ಟ್ರಸ್ಟ್‌ ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ಎಂ.ಬಿ. ಲಿಂಗದಳ ಹೇಳಿದರು.

ಸೋಮವಾರ ನಗರದಲ್ಲಿ ನಡೆದ ಟ್ರಸ್ಟ್‌ನ ಎರಡನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಟ್ರಸ್ಟ್‌ ರಾಜ್ಯದಲ್ಲಿ ಒಟ್ಟು 11 ಶಾಖೆಗಳನ್ನು ಹೊಂದಿದೆ. ಉತ್ತಮ ಸೇವೆ, ವಿಶ್ವಾಸಾರ್ಹತೆ ಹಾಗೂ ಸಿಬ್ಬಂದಿಯ ದಕ್ಷತೆಯಿಂದ ಪ್ರತಿ ವರ್ಷ ಟ್ರಸ್ಟ್‌ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿಟ್ಸ್‌ಗಳಲ್ಲಿ ಜನ ಹಣ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ, ನಮ್ಮ ಟ್ರಸ್ಟ್‌ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದರು.

ADVERTISEMENT

ನಿರ್ದೇಶಕರಾದ ಹೆಬ್ಬಿಲಿಂಗ, ಮಹೇಶ್‌ ಗಿಣಿಗೆರೆ, ರಾಜು, ರೇವಣ್ಣಸಿದ್ದಪ್ಪ, ಉದ್ಯಮಿ ಕಾಸೆಟ್ಟಿ ಉಮಾಪತಿ, ಬ್ಯಾಂಕ್‌ ವ್ಯವಸ್ಥಾಪಕ ಗುರುರಾಜ, ಗೋವಿಂದ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.