ADVERTISEMENT

ಮೈಲಾರ : ಸಿಡಿಲಿಗೆ ವ್ಯಕ್ತಿ ಬಲಿ

​ಪ್ರಜಾವಾಣಿ ವಾರ್ತೆ
Published 12 ಮೇ 2023, 16:36 IST
Last Updated 12 ಮೇ 2023, 16:36 IST
   

ಹೂವಿನಹಡಗಲಿ (ವಿಜಯನಗರ ಜಿಲ್ಲೆ) : ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಗ್ರಾಮದ ಶಿವಪ್ಪ ಪುಟ್ಟಪ್ಪ ಚಂದಾಪುರ (58) ಮೃತರು. ಎಮ್ಮೆ ಮೇಯಿಸಲು ಇವರು ಅಡವಿಗೆ ಹೋಗಿದ್ದಾಗ ಸಿಡಿಲು ಎರಗಿದೆ. ಸಂಜೆ ಎಮ್ಮೆಗಳಷ್ಟೆ ಮನೆಗೆ ಹಿಂದಿರುಗಿದ್ದರಿಂದ ಕುಟುಂಬದ ಸದಸ್ಯರು ಆತಂಕಗೊಂಡು ಶೋಧ ನಡೆಸಿದಾಗ, ಹೊರ ವಲಯದಲ್ಲಿ ಸಿಡಿಲಿಗೆ ಶಿವಪ್ಪ ಮೃತಪಟ್ಟಿರುವುದು ಗೊತ್ತಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT