ADVERTISEMENT

ಶಾಸಕ ಭೀಮ ನಾಯ್ಕರಿಗೆ ಗ್ರಾಮಸ್ಥರಿಂದ ಘೇರಾವ್‌, ತರಾಟೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 8:36 IST
Last Updated 4 ಮಾರ್ಚ್ 2023, 8:36 IST
   

ಹೊಸಪೇಟೆ (ವಿಜಯನಗರ): ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಲ್ಲಾಹುಣ್ಸಿಯಲ್ಲಿ ಶಾಸಕ ಭೀಮ ನಾಯ್ಕ ಅವರನ್ನು ಗ್ರಾಮಸ್ಥರು ಘೇರಾವ್‌ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಶಾಸಕರು ಶುಕ್ರವಾರ ರಾತ್ರಿ ಕಾಂಗ್ರೆಸ್‌ ಪಕ್ಷದ ಬೂತ್‌ ಮಟ್ಟದ ಸಭೆಗೆ ತೆರಳಿದ್ದರು. ಈ ವೇಳೆ ಶಾಸಕರು ಹಾಗೂ ಅವರ ಬೆಂಬಲಿಗರನ್ನು ಗ್ರಾಮಸ್ಥರು ಸುತ್ತುವರಿದು, ಹರಿಹಾಯ್ದು ಅಸಮಾಧಾನ ವ್ಯಕ್ತಪಡಿಸಿದರು.

‘ಹತ್ತು ವರ್ಷಗಳಿಂದ ಗ್ರಾಮಕ್ಕೆ ಭೇಟಿ ನೀಡಿಲ್ಲ. ಭಾರಿ ಮಳೆಗೆ ಅಪಾರ ಬೆಳೆ ಹಾನಿಯಾದಾಗಲೂ ಬಂದಿರಲಿಲ್ಲ. ಈಗೇಕೇ ಬಂದಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ‘ಕೆಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿರುವೆ. ಉಳಿದ ಬೇಡಿಕೆಗಳನ್ನು ಬರುವ ದಿನಗಳಲ್ಲಿ ಈಡೇರಿಸಲಾಗುವುದು’ ಎಂದು ಶಾಸಕರು ಹೇಳಿದರು. ಆದರೆ, ಅದಕ್ಕೆ ಗ್ರಾಮಸ್ಥರು ಸುಮ್ಮನಾಗಲಿಲ್ಲ. ಬಳಿಕ ಪೊಲೀಸರು, ಗ್ರಾಮದ ಹಿರಿಯರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.