ವಿಜಯಪುರ: ಸಮಾಜದ ಒಳತಿಗಾಗಿ ಆಸೆಯ ಬಲೆಯಲ್ಲಿ ಸಿಲುಕಿದ ಮಾನವನನ್ನು ನೈಜ ಜೀವನಕ್ಕೆ ತರುವುದು ಅತ್ಯವಶ್ಯವಿದೆ ಎಂದು ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹೇಳಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ 82ನೇ ತ್ರಿಮೂರ್ತಿ ಶಿವ ಜಯಂತಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ಹಾಸಿಂಪೀರ ವಾಲಿಕಾರ, ಮಾತನಾಡಿದರು. ರಾಜಯೋಗಿನಿ ಬ್ರಹ್ಮಕುಮಾರಿ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಕುಮಾರಿ ರೇಣುಕಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ವೈಜನಾಥ ಕರ್ಪೂರಮಠ, ಡಾ.ಕೆ.ಜಿ.ಪೂಜಾರಿ ಮಾತನಾಡಿದರು. ಬಿ.ಕೆ.ಸರೋಜ ಅಕ್ಕ ನಿರೂಪಿಸಿದರು. ಬಿ.ಕೆ.ಗಂಗಾಧರ ಅಣ್ಣ ಸ್ವಾಗತಿಸಿದರು. ಬಿ.ಕೆ.ಶ್ರೀಮಂತ ಅಣ್ಣ ವಂ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.