ADVERTISEMENT

ದೇವಾನಂದ ಗೆಲುವು: ಜೆಡಿಎಸ್‌ ಕಾರ್ಯಕರ್ತರ ವಿಜಯೋತ್ಸವ

ರಾಜಾ ಪರಶುರಾಮ ನಾಯಕ
Published 16 ಮೇ 2018, 9:27 IST
Last Updated 16 ಮೇ 2018, 9:27 IST
ನಾಗಠಾಣ ಮತಕ್ಷೇತ್ರದ ಅಭ್ಯರ್ಥಿ ದೇವಾನಂದ ಚವ್ಹಾಣ ಅವರ ಗೆಲುವು ಹೊರಬೀಳುತ್ತಿದ್ದಂತೆ ಚಡಚಣದಲ್ಲಿ ಮಂಗಳವಾರ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು
ನಾಗಠಾಣ ಮತಕ್ಷೇತ್ರದ ಅಭ್ಯರ್ಥಿ ದೇವಾನಂದ ಚವ್ಹಾಣ ಅವರ ಗೆಲುವು ಹೊರಬೀಳುತ್ತಿದ್ದಂತೆ ಚಡಚಣದಲ್ಲಿ ಮಂಗಳವಾರ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು   

ಚಡಚಣ: ನಾಗಠಾಣ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ದೇವಾನಂದ ಚವ್ಹಾಣ ಅವರ ಗೆಲುವು ಹೊರಬೀಳು ತ್ತಿದ್ದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಶಿವಾನಂದ ವಾಳಿಖಿಚಿಡಿ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹಣಮಂತ ಹೂನಳ್ಳಿ, ‘ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ .ಹೀಗಾಗಿ ನೂತನ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳುವುದು ನಿಶ್ಚಿತ’ ಎಂದರು.

ಮುಖಂಡ ಚಂದು ಶಿಂಧೆ ಮಾತ ನಾಡಿ, ‘ಕುಮಾರಸ್ವಾಮಿ ನೇತೃತ್ವದಲ್ಲಿ ಜನತೆಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದಾರೆ. ನಾಗಠಾಣ ಮತಕ್ಷೇತ್ರದ ಅಭ್ಯರ್ಥಿ ದೇವಾನಂದ ಚವ್ಹಾಣ ಸಚಿವ ಸ್ಥಾನ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದರು.

ADVERTISEMENT

ಮಲ್ಲು ಕಟ್ಟಿಮನಿ ರಾಜೂ ಡೋಣ ಗಾಂವ, ಶಿಕಂದರ್ ಸಾವಳಸಂಗ, ಮುರ್ತುಜ ನಧಾಫ, ಲಾಲಸಾಬ ಅತ್ತಾರ, ಈರಣ್ಣ ಲಾಲಸಂಗಿ, ಮಹ ದೇವ ಶಿಂಧೆ, ಸುಭಾಸ ಶಿಂಧೆ, ಅರ್ಜುನ ಕ್ಷತ್ರಿ, ಅಂಬಾದಾಸ, ಪ್ರವೀಣ ಪಾಟೀಲ, ದೀಪಕ್ ಕದಮ್, ಲಕ್ಷ್ಮಣ ಕ್ಷತ್ರಿ, ಮಹಾದೇವ ವಾಘಮೋರೆ, ಅಣ್ಣಾ ಪೂಜಾರಿ, ಶ್ರೀಶೈಲ ಮಾಳಕೋಟಗಿ, ಪ್ರವೀಣ ಪಾಟೀಲ, ಸಚಿನ ವಾಲಿ, ಪಿಂಟು ಶಿಂಧೆ, ಕಲ್ಲಪ್ಪ ವಾಘಮೋರೆ, ವಿಠ್ಠಲ ಶಿಂಧೆ, ಲಕ್ಷ್ಮಣ ಶಿಂಧೆ, ಸಂಜು ಕ್ಷತ್ರಿ, ದುಂಡಪ್ಪಾ ವಾಘಮೋರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.