ADVERTISEMENT

ಮಹಿಳೆಯರಿಂದ 5 ಸಾವಿರ ಹೋಳಿಗೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 6:56 IST
Last Updated 26 ನವೆಂಬರ್ 2017, 6:56 IST

ಕೆರೂರ: ಇಲ್ಲಿನ ದೇವಾಂಗ ಪುರಾಣ ಆಲಿಕೆಗೆ ಬರುವ ಭಕ್ತರಿಗೆ ಸಾವಿರಾರು ರೊಟ್ಟಿಯನ್ನು ಮಹಿಳೆಯರು ತಯಾರಿಸಿದ್ದಾರೆ. ಇಲ್ಲಿನ ಬನಶಂಕರಿ ದೇಗುಲದ ಶತಮಾನ (ಮುಖ ಮಂಟಪ) ಭವನ ಮತ್ತು ಗರ್ಭಗುಡಿಯ ರಜತ ದ್ವಾರದ ಉದ್ಘಾಟನೆ ನಿಮಿತ್ತ ಕಂಠಿಪೇಟೆ ಭಕ್ತಾದಿಗಳು ಉದುರ್ ಸಜ್ಜಕ, ಅನ್ನ ಸಾಂಬಾರ್, ಕೋಟೇಶ್ವರ ಕಾಲೊನಿ ಜತೆ ಕರಿಗಡಬು ಈಚೆಗೆ ಜನರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬಸರಿಗಿಡಪೇಟೆ ಜನರು, ಮುಖಂಡ ಲಾಖೋಪತಿ ಹೊಸಪೇಟೆ, ಅಶೋಕ ಮುಂಡಾಸದ, ರೋಮಣ್ಣ ಸೂಳಿಕೇರಿ, ಹನಮಂತ ಬಳಗೇರಿ, ರವಿ ಹೊಸಪೇಟೆ, ಶ್ರೀ ಕಾಂತ ಗೌಡರ, ಬುದ್ಧಿವಂತಪ್ಪ ಮುಂಡಾಸದ, ಗಣೇಶ ಪುರಾಣಿಕ ಸಿಹಿ ಹೋಳಿಗೆಯ ಸವಿಯ ಆಯೋಜಕರು. ಇದಲ್ಲದೆ ಸಮಾಜದ ವಿವಿಧ ಓಣಿ ಮಹಿಳೆಯರು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಹೋಳಿಗೆ ತಯಾರಿದ್ದರು.

ರುದ್ರಮುನಿ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಭಾವನೆಗಳು ಗಟ್ಟಿಗೊಳಿಸುವ ಮೂಲಕ ಭಕ್ತರ ಮನಸ್ಸು ಪರಿವರ್ತನೆಯತ್ತ ಸಾಗಲಿವೆ ಎಂದರು. ದೇವಾಂಗಮಠದ ವಿರೂಪಾಕ್ಷ ಸ್ವಾಮೀಜಿ ಭಕ್ತರಿಗೆ ದೇವಾಂಗ ಮಹರ್ಷಿಗಳ ಪುರಾಣ ಪ್ರವಚನ ಪಠಿಸುವರು. ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ಮುಖಂಡ ವಿಠ್ಠಲಗೌಡ ಗೌಡರ, ದಶರಥಪ್ಪ ಅಂಕದ, ಶಿವಪ್ಪ ಹೆಬ್ಬಳ್ಳಿ, ಮನೋಹರ ಮಾನ್ವಿ, ವಿಠ್ಠಲ ಸಣ್ಣಕ್ಕಿ, ವಿರುಪಾಕ್ಷಿ ಕುದರಿ, ಶಂಕ್ರಪ್ಪ ಗದಗಿನ, ಬಸವರಾಜ ಲ್ಯಾ ವಿ, ವಿಜಯ್ ಪರದೇಶಿ, ವಿನಾಯಕ ದಾಸಮನಿ, ತಿಪ್ಪಣ್ಣ ಹುಗ್ಗಿ, ಗುಂಡಣ್ಣ ಬೋರಣ್ಣವರ, ಅರ್ಜುನ ಹರದೊ ಳ್ಳಿ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.