ADVERTISEMENT

ಮೂತ್ರಪಿಂಡ ಚಿಕಿತ್ಸೆ: ನೆರವಿಗಾಗಿ ಮನವಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 8:20 IST
Last Updated 4 ಏಪ್ರಿಲ್ 2012, 8:20 IST

ಮುದ್ದೇಬಿಹಾಳ: ತಾಲ್ಲೂಕಿನ ತಂಗಡಗಿ ಗ್ರಾಮದ ಆನಂದ ಮರಸಂಗಯ್ಯ ತೆಗ್ಗಿನಮಠ (27) ಕಳೆದ ಐದು ವರ್ಷದಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಸಾಕಷ್ಟು ಹಣ ವೆಚ್ಚ ಮಾಡಿದ್ದಾರೆ. ಆರೋಗ್ಯ ಸುಧಾರಿಸಿಲ್ಲ. ಮೂತ್ರಪಿಂಡ ಕಸಿಯಿಂದ ಮಾತ್ರ ಜೀವ ರಕ್ಷಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಗೆ ಕನಿಷ್ಠ 5 ಲಕ್ಷ ರೂಪಾಯಿ ಅಗತ್ಯವಿದೆ. ಅಲ್ಲಿಯವರೆಗೆ ಡಯಲಿಸಿಸ್ ಮಾಡಿಸಬೇಕಾಗಿದೆ.  ಆನಂದ ತೆಗ್ಗಿನಮಠ ಅವರ ಚಿಕಿತ್ಸೆಗೆ ದಾನಿಗಳು ನೆರವು ನೀಡಬಹುದು.

ದಾನಿಗಳು ಬ್ಯಾಂಕ್ ಖಾತೆ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ- 32212997007) ಹಾಗೂ  ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (3138966737)ಗೆ ಹಣ ಜಮಾ ಮಾಡುವಂತೆ ಆನಂದನ ತಾಯಿ ಶಿವಗಂಗಮ್ಮ (ಮೊ. 9972896574 ಹಾಗೂ 9591072882) ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.