ವಿಜಯಪುರ: ಶಕ್ತಿ ಯೋಜನೆಗೆ ಶತಕೋಟಿ ಸಂಭ್ರಮದ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 6 ಜನ ಚಾಲಕರು ಅಪಘಾತ ರಹಿತ ಚಾಲನೆಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಮೊಹಮ್ಮದ ಫೈಜ್ ತಿಳಿಸಿದ್ದಾರೆ.
ನಿಗಮದ ಚಾಲಕರಾದ ಮುದ್ದೇಬಿಹಾಳ ಘಟಕದ ಸಿ.ಎಸ್.ಕಸಬೇಗೌಡರ, ಸಿಂದಗಿಯ ಪಿ.ಬಿ.ಕಾಂಬಳೆ, ವಿಜಯಪುರ 1ನೇ ಘಟಕದ ಎಸ್.ಎ.ಬಿರಾದಾರ, ಸಿಂದಗಿಯ ಎನ್.ಎಂ.ಮಾದರ, ತಾಳಿಕೋಟೆಯ ಕೆ.ಎಚ್.ಓಲೇಕಾರ ಹಾಗೂ ವಿಜಯಪುರ ಘಟಕ-1ರ ಎಂ.ಐ.ಸೋಲಾಪುರ ಅವರು ಚಿನ್ನದ ಪದಕ ಪಡೆದುಕೊಂಡಿದ್ದು, ಇವರ ಸಾಧನೆಗೆ ವಿಭಾಗೀಯ ನಿಯಂತ್ರಣಾಧಿಕಾರಿ ಹರ್ಷ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.