ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದಿಂದ ಮಂಗಳವಾರ ಸೈಕಲ್ ಜಾಥಾ ನಡೆಯಿತು.
ನಗರದ ಗೋದಾವರಿ ಹೋಟೆಲ್ನಿಂದ ಪ್ರಾರಂಭವಾಗಿ ಸಿದ್ದೇಶ್ವರ ದೇವಸ್ಥಾನ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ ಅಂಬೇಡ್ಕರ್ ವೃತ್ತ ಮೂಲಕ ಸಾಗಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ವೃತ್ತದಲ್ಲಿ ಮುಕ್ತಾಯವಾಯಿತು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ತಮ್ಮ ಪ್ರಾಣವನ್ನೆ ತೆತ್ತಿದ್ದಾರೆ. ಅವರನ್ನು ಸದಾ ಸ್ಮರಿಸಬೇಕು. ಪ್ರತಿಯೊಬ್ಬರು ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಚಂದ್ರಶೇಖರ ಕವಟಗಿ,ಸತೀಶ್ ಪಾಟೀಲ,ಪ್ರಕಾಶ್ ಅಕ್ಕಲಕೋಟ, ಶಿವರುದ್ರ ಬಾಗಲಕೋಟ, ಗೋಪಾಲ ಘಟಕಾಂಬಳೆ, ಭೀಮಾಶಂಕರ ಹದನೂರ, ಸುರೇಶ್ ಬಿರಾದಾರ, ರಾಜು ಬಿರಾದಾರ, ಮಳುಗೌಡ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ಅನೀಲ ಉಪ್ಪಾರ, ರಾಹುಲ ಜಾಧವ, ಸೋಮುಮಠ, ಗುರುಗಚ್ಚಿನಮಠ, ವಿಜಯ ಜೋಶಿ, ವಿನಾಯಕ ದಹಿಂಡೆ, ರಾಜೇಶ ತವಸೆ, ಆದಿತ್ಯ ತಾವರಗೇರೆ,ಭರತ ಕೋಳಿ, ಪಾಪು ಸಿಂಗ್ ರಜಪೂತ, ವಿಠ್ಠಲ ನಡುವಿನಕೇರಿ, ಸಂದೀಪ ಪಾಟೀಲ, ರಾಜು ಹುನ್ನೂರ, ನಿಖಿಲ ಮ್ಯಾಗೇರಿ, ಶಿವರಾಜ ಮಡಿವಾಳರ, ಪ್ರವೀಣಕುಮಾರ, ಭಾರತಿ ಭುಯ್ಯಾಂರ್, ಸುವರ್ಣ ಕುರ್ಲೆ, ವಿಜಯ ಹಿರೇಮಠ, ಸಂಪತ ಕೋಹಳ್ಳಿ, ಸೋಮಶೇಖರ, ವಿಶಾಲ ಹಿರಾಸ್ಕರ, ಶಿವನಗೌಡ ಪಾಟೀಲ, ಸಂತೋಷ ಜಾಧವ, ವಿಕಾಸ ಪದಕಿ, ಗುರು ದೇಶಪಾಂಡೆ, ಸಂತೋಷ ನಿಂಬರಗಿ, ಆನಂದ ಮುಚ್ಚಂಡಿ, ಗಣೇಶ ಹಜೇರಿ, ನಿಖಿಲ ಚೌಧರಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.