
ಪ್ರಜಾವಾಣಿ ವಾರ್ತೆ
ಮುದ್ದೇಬಿಹಾಳ: ಪಟ್ಟಣದ ಬನಶಂಕರಿ ದೇವಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಗೋಪೂಜೆ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ಚನ್ನಬಸ್ಸು ಗುಡ್ಡದ, ಪುರವಂತರಾದ ಚಂದ್ರಕಾಂತ ಹೆಬ್ಬಾಳ, ಜಾತ್ರಾ ಕಮಿಟಿ ಸದಸ್ಯರಾದ ಡಂಬಳ, ಈರಪ್ಪ ಬಡಿಗೇರ, ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜು ಹೊನ್ನುಟಗಿ, ಉಮೇಶ ನಾಗಠಾಣ, ಶಿವಕುಮಾರ ತಾರನಾಳ, ಶಾಹಿಲ್ ನಾಗಠಾಣ, ಶಿವಾನಂದ ಕಲ್ಯಾಣಮಠ, ಪ್ರವೀಣ ನಾಗಠಾಣ, ಬಸವರಾಜ ಕಲ್ಲುಂಡಿ, ನೇಕಾರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಚಿತ್ತರಗಿ, ವಿಜಯ ಐಹೊಳ್ಳಿ, ನಾಗಪ್ಪ ಅಗಸಬಾಳ, ಉಮ್ಮಣ್ಣ ಹೆಬ್ಬಾಳ, ಅನುರೂಪ ಗಡೇದ ಇದ್ದರು.