ADVERTISEMENT

ಸಿಂದಗಿ: ಹೃದಯಾಘಾತದಿಂದ ಬಸ್‌ ಚಾಲಕ ಮೃತ್ಯು

​ಪ್ರಜಾವಾಣಿ ವಾರ್ತೆ
Published 31 ಮೇ 2023, 15:24 IST
Last Updated 31 ಮೇ 2023, 15:24 IST
   

ಸಿಂದಗಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಫಜಲಪುರ ಘಟಕಕ್ಕೆ ಸೇರಿದ ಬಸ್ ಚಾಲನೆ ಮಾಡುವಾಗ ಚಾಲಕ ಮುರಿಗೆಪ್ಪ ಸಿದ್ದಪ್ಪ ಅಥಣಿ ಎಂಬುವವರಿಗೆ ಹೃದಯಾಘಾತವಾಗಿ ಸ್ಥಳದಲ್ಲಿಯೇ ಮಂಗಳವಾರ ಮೃತಪಟ್ಟಿದ್ದಾರೆ.

ಕಲಬುರ್ಗಿಯಿಂದ ವಿಜಯಪುರಕ್ಕೆ ಹೊರಟಿದ್ದ ಬಸ್ ಸಿಂದಗಿ ಬಳಿ ಹೆಡ್ ಲೈಟ್ ಸಮಸ್ಯೆ ಉಂಟಾಗಿದ್ದರಿಂದ ಪ್ರಯಾಣಿಕರನ್ನು ಬೇರೆ ಬಸ್‌ಗೆ ಹತ್ತಿಸಿ ಲೈಟ್ ದುರಸ್ತಿಗಾಗಿ ಡಿಪೊಗೆ ಹೊರಟಿದ್ದಾಗ ಈ ಘಟನೆ ನಡೆದಿದೆ.

ಬಸ್‌ನಲ್ಲಿದ್ದ ನಿರ್ವಾಹಕ ಶರಣು ಟಾಕಳಿ ಚಾಲಕನತ್ತ ಧಾವಿಸಿ ಬಸ್‌ ನಿಯಂತ್ರಣಕ್ಕೆ ತಂದಿದ್ದಾರೆ. ಮೃತ ಚಾಲಕ ಮುರಗೆಪ್ಪ ದೇವರಹಿಪ್ಪರಗಿ ತಾಲ್ಲೂಕು ಗಂಗನಳ್ಳಿ ಗ್ರಾಮದವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.