ADVERTISEMENT

ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 11:41 IST
Last Updated 23 ಅಕ್ಟೋಬರ್ 2019, 11:41 IST

ವಿಜಯಪುರ: ಇಂಡಿ ತಾಲ್ಲೂಕು ತಡವಲಗಾ ಗ್ರಾಮದಲ್ಲಿ ಬುಧವಾರ ಕೃಷಿ ಹೊಂಡಕ್ಕೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ಪ್ರೀತಿ ಸುರೇಶ ಮುತ್ತಗಿ (8) ಮೃತಪಟ್ಟವಳು. ಈಕೆ ತಡವಲಗಾ ತೋಟದ ವಸ್ತಿ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಳು. ದಸರಾ ರಜೆ ಅಂಗವಾಗಿ ಅಜ್ಜಿಯ ಮನೆಗೆ ಬಂದಿದ್ದಳು.

‘ಬೆಳಿಗ್ಗೆ 11 ಗಂಟೆ ಸುಮಾರಿಗೆ 3–4 ಮಕ್ಕಳು ಆಟವಾಡಲು ಕೃಷಿ ಹೊಂಡಕ್ಕೆ ಹೋಗಿವೆ. ಈ ವೇಳೆ ಪ್ರೀತಿ ಆಕಸ್ಮಿಕವಾಗಿ ಜಾರಿ ಹೊಂಡಕ್ಕೆ ಬಿದ್ದಿದ್ದಾಳೆ. ಹೊಂಡವು 15 ಅಡಿ ಆಳವಿದ್ದು, ನೀರಿನಿಂದ ಸಂಪೂರ್ಣ ಭರ್ತಿಯಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಮೃತ ಬಾಲಕಿ ತಾಯಿ ಜ್ಯೋತಿ ಅವರನ್ನು ಅದೇ ಗ್ರಾಮದ ಸುರೇಶ ಮುತ್ತಗಿ ಅವರಿಗೆ ಮದುವೆ ಮಾಡಿಕೊಡಲಾಗಿದೆ. ಇವರಿಗೆ ಮೂರು ಹೆಣ್ಣು ಮತ್ತು ಒಂದು ಗಂಡು ಮಗುವಿದ್ದು, ಮೃತ ಬಾಲಕಿ ಮೊದಲ ಮಗಳಾಗಿದ್ದಾಳೆ’ ಎಂಬುದು ಮೂಲಗಳ ವಿವರಣೆ.

ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.