ADVERTISEMENT

ಇಂಡಿ: ಕೆಪಿಟಿಸಿಎಲ್ ಜೆಇ ಅಮಾನತು

​ಪ್ರಜಾವಾಣಿ ವಾರ್ತೆ
Published 20 ಮೇ 2024, 15:50 IST
Last Updated 20 ಮೇ 2024, 15:50 IST

ಇಂಡಿ: ತಾಲ್ಲೂಕಿನ ಹಿರೇಮಸಳಿ ಗ್ರಾಮದ ವಿದ್ಯುತ್ ವಿತರಣಾ ಕಚೇರಿ (ಕೆಪಿಟಿಸಿಎಲ್) ಆವರಣದಲ್ಲಿ ಮದ್ಯ ಸೇವನೆ ಮಾಡಿ, ಅರೆಬೆತ್ತಲಾಗಿ ಮಲಗಿದ್ದ ಆರೋಪದ ಮೇರೆಗೆ ಕಿರಿಯ ಎಂಜಿನಿಯರ್‌ (ಜೆ.ಇ) ಗೊಲ್ಲಾಳಪ್ಪ ಪಾಟೀಲ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಹೆಸ್ಕಾಂ ಎಇ ತಿಳಿಸಿದ್ದಾರೆ.

ಗೊಲ್ಲಾಳಪ್ಪ ಪಾಟೀಲ ಕಚೇರಿ ಆವರಣದಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವನೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು. ಜೊತೆಗೆ ಗ್ರಾಮಸ್ಥರು ಈ ಸಂಬಂಧ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ ಕೆಪಿಟಿಸಿಎಲ್‌ ಹಿರಿಯ ಅಧಿಕಾರಿಗಳು ಪಾಟೀಲ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT