ADVERTISEMENT

ಚಡಚಣ ಆಸ್ಪತ್ರೆಗೆ ಲೋಕಾಯುಕ್ತ ಎಸ್‌ಪಿ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 14:35 IST
Last Updated 27 ಸೆಪ್ಟೆಂಬರ್ 2022, 14:35 IST
ವಿಜಯಪುರ ಲೋಕಾಯುಕ್ತ ಎಸ್‌.ಪಿ ಅನಿತಾ ಹದ್ದನ್ನವರ ಅವರು ಚಡಚಣ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ದಿಢೀರ್‌ನೆ ಭೇಟಿ ನೀಡಿ  ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು 
ವಿಜಯಪುರ ಲೋಕಾಯುಕ್ತ ಎಸ್‌.ಪಿ ಅನಿತಾ ಹದ್ದನ್ನವರ ಅವರು ಚಡಚಣ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ದಿಢೀರ್‌ನೆ ಭೇಟಿ ನೀಡಿ  ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು    

ವಿಜಯಪುರ: ಲೋಕಾಯುಕ್ತ ಎಸ್‌.ಪಿಅನಿತಾ ಹದ್ದನ್ನವರ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆಚಡಚಣ ಸರ್ಕಾರಿ ಆಸ್ಪತ್ರೆಗೆ ದಿಢೀರ್‌ನೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು.

ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದನ್ನು ಮತ್ತು ಬಹುತೇಕ ಸಿಬ್ಬಂದಿ ಗೈರು ಇರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಕ್ಕಳ ಆರೋಗ್ಯ ಪುನಃಶ್ಚೇತನ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು.ಲೋಕಾಯುಕ್ತದ ಪೊಲೀಸ್ ನಿರೀಕ್ಷಕ ಆನಂದ ಟಕ್ಕನ್ನವರ ಮತ್ತು ಸಿಬ್ಬಂದಿ ಎಂ.ಎಸ್ ತೆಗ್ಗಳ್ಳಿ ಹಾಗೂ ಅಮರಖೇಡ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.