ADVERTISEMENT

ವಿಜಯಪುರ | ಗಾಂಜಾ ಸಾಗಾಟ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 16:31 IST
Last Updated 4 ಸೆಪ್ಟೆಂಬರ್ 2022, 16:31 IST
ಬಬಲೇಶ್ವರ ತಾಲ್ಲೂಕಿನ ಸಂಗಾಪೂರ ಕ್ರಾಸ್ ಹತ್ತಿರ ಅಬಕಾರಿ ಸಿಬ್ಬಂದಿಗೆ ಬೈಕ್‌ ಸಹಿತ ಸೆರೆ ಸಿಕ್ಕಿರುವ ಗಾಂಜಾ ಸಾಗಿಸುತ್ತಿದ್ದ ಆರೋಪಿ
ಬಬಲೇಶ್ವರ ತಾಲ್ಲೂಕಿನ ಸಂಗಾಪೂರ ಕ್ರಾಸ್ ಹತ್ತಿರ ಅಬಕಾರಿ ಸಿಬ್ಬಂದಿಗೆ ಬೈಕ್‌ ಸಹಿತ ಸೆರೆ ಸಿಕ್ಕಿರುವ ಗಾಂಜಾ ಸಾಗಿಸುತ್ತಿದ್ದ ಆರೋಪಿ   

ವಿಜಯಪುರ:ಬಬಲೇಶ್ವರ ತಾಲ್ಲೂಕಿನ ಸಂಗಾಪೂರ ಕ್ರಾಸ್ ಹತ್ತಿರಅಬಕಾರಿ ಸಿಬ್ಬಂದಿ ದಾಳಿ ಮಾಡಿ, ಬೈಕ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 1 ಲಕ್ಷ ಮೌಲ್ಯದ 980 ಗ್ರಾಂ ಒಣಗಿದ ಗಾಂಜಾವನ್ನು ಪತ್ತೆಹಚ್ಚಿದ್ದಾರೆ.

ಆರೋಪಿ ಪರಸಪ್ಪ ಸಿಂಗೆ ಎಂಬಾತನನ್ನು ಬಂಧಿಸಿ ಈತನ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಹಾಜರು ಪಡಿಸಿರುತ್ತಾರೆ.

ದಾಳಿಯಲ್ಲಿಜಿಲ್ಲಾ ವಿಚಕ್ಷಣ ದಳದ ಅಬಕಾರಿ ನಿರೀಕ್ಷಕಮಹಾದೇವ ಪೂಜಾರಿ, ಅಬಕಾರಿ ಕಾನ್‌ ಸ್ಟೆಬಲ್‌ಗಳಾದ ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ ಹಾಗೂ ವಾಹನ ಚಾಲಕ ಪರಶುರಾಮ ತೆಲಗಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.