ADVERTISEMENT

ಎಎಪಿಯತ್ತ ಜನ ಆಕರ್ಷಣೆ: ವಾಲಿಕಾರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 14:22 IST
Last Updated 1 ಏಪ್ರಿಲ್ 2023, 14:22 IST
ವಿಜಯಪುರ ನಗರ ಮತಕ್ಷೇತ್ರದ ಎಎಪಿ ಅಭ್ಯರ್ಥಿ ಹಾಸಿಂಪೀರ ವಾಲಿಕಾರ ಕನಕದಾಸ ಬಡಾವಣೆಯಲ್ಲಿ ಶುಕ್ರವಾರ ಪಾದಯಾತ್ರೆಯ ಮೂಲಕ  ಮತಯಾಚನೆ ಮಾಡಿದರು 
ವಿಜಯಪುರ ನಗರ ಮತಕ್ಷೇತ್ರದ ಎಎಪಿ ಅಭ್ಯರ್ಥಿ ಹಾಸಿಂಪೀರ ವಾಲಿಕಾರ ಕನಕದಾಸ ಬಡಾವಣೆಯಲ್ಲಿ ಶುಕ್ರವಾರ ಪಾದಯಾತ್ರೆಯ ಮೂಲಕ  ಮತಯಾಚನೆ ಮಾಡಿದರು    

ವಿಜಯಪುರ: ಶಿಕ್ಷಣ, ವಿದ್ಯುತ್‌, ಆರೋಗ್ಯ, ನೀರು ಉಚಿತವಾಗಿ ನೀಡುವ ಮೂಲಕ ದೇಶದ ಗಮನ ಸೆಳೆದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಜನಪ್ರಿಯ ಕಾರ್ಯಕ್ರಮ ಗಮನಿಸಿ ರಾಜ್ಯದ ಮತದಾರರು ಆಮ್ ಆದ್ಮಿ ಪಕ್ಷದ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂದು ವಿಜಯಪುರ ನಗರ ಮತಕ್ಷೇತ್ರದ ಅಭ್ಯರ್ಥಿ ಹಾಸಿಂಪೀರ ವಾಲಿಕಾರ ಹೇಳಿದರು.

ನಗರದ ಕನಕದಾಸ ಬಡಾವಣೆಯಲ್ಲಿ ಶುಕ್ರವಾರ ಪಾದಯಾತ್ರೆಯ ಮೂಲಕ ಮನೆ ಮನೆಗೆ ಕರಪತ್ರ ವಿತರಿಸಿ ಮತಯಾಚನೆ ಮಾಡಿದರು.

ವಿಜಯಪುರ ನಗರ ಸಾಮರಸ್ಯ, ಇತಿಹಾಸ ಹೊಂದಿರುವ ಪ್ರಸಿದ್ಧ ನಗರ. ಎಲ್ಲ ಮತದಾರರು ಭಯಭೀತರಾಗದೆ ಮತದಾನದಲ್ಲಿ ಭಾಗವಹಿಸಿ ನನ್ನನ್ನು ಆಯ್ಕೆಮಾಡಬೇಕು. ವಿದ್ಯಾವಂತ ಹಾಗೂ ಬುದ್ಧಿವಂತ ಮತದಾರರು ವಿಜಯಪುರ ನಗರ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಗೆಲ್ಲಿಸುವ ಮೂಲಕ ಜಾತಿಯ ಹಾಗೂ ಭಯದ ವಾತಾವರಣ ನಿರ್ಮಿಸುವವರನ್ನು ಸೋಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ADVERTISEMENT

ಸರ್ವಾನಂದ ಕೂಬರಡ್ಡಿ, ಲಕ್ಷ್ಮಿ ಬಿರಾದಾರ, ಲಕ್ಕಮ್ಮ ಬೆನಕಟ್ಟಿ, ರುದ್ರಮ್ಮ ಸಾಲಿ, ಸಂಗೀತಾ ಮಸೂತಿ, ಕಸ್ತೂರಿ ಸಾರವಾಡ, ಜುಬೇರ ಕೂಡಗಿ, ಹಾಪೀಜ್‌ ವಾಲಿಕಾರ, ಮುದಸ್ಸರ ವಾಲಿಕಾರ, ಗಂಗಮ್ಮ ರಡ್ದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.