ಧೂಳಖೇಡ:ವಿಜಯಪುರ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಧೂಳಖೇಡ ಗ್ರಾಮದ ಚಿನ್ನಪ್ಪ ಧರೆಪ್ಪ ಐರೋಡಗಿ (32), ತಮಿಳುನಾಡು ಮೂಲದ ಕಾರ್ತಿಕೇಯನ್ ವೆಂಕಟಾಚಲ (44) ಸ್ಥಳದಲ್ಲೇ ಮೃತಪಟ್ಟವರು ಎಂದು ಝಳಕಿ ಪೊಲೀಸರು ತಿಳಿಸಿದ್ದಾರೆ.
ರಾಜಸ್ತಾನದ ಲಾರಿ ಚಾಲಕ ಗೌರುರಾಮ ಗುರ್ಜರ ಎಂಬಾತ ಝಳಕಿ ಕಡೆಯಿಂದ ಧೂಳಖೇಡದತ್ತ ವೇಗವಾಗಿ ಲಾರಿ ಚಲಾಯಿಸುತ್ತಿದ್ದಾಗ, ಎದುರು ಬರುತ್ತಿದ್ದ ಕಾರು, ಬೈಕ್ಗೆ ಡಿಕ್ಕಿ ಹೊಡೆದು, ಈ ಅಪಘಾತ ನಡೆದಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.