ADVERTISEMENT

ಇಂಡಿಯಾ ಮೈತ್ರಿಯಲ್ಲಿ ಹಾವು, ಮುಂಗುಸಿಗಳು ಒಟ್ಟಿಗೆ ಸೇರಿವೆ: ಸಂಸದ ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 15:48 IST
Last Updated 29 ಡಿಸೆಂಬರ್ 2023, 15:48 IST
<div class="paragraphs"><p>ಸಂಸದ ತೇಜಸ್ವಿ ಸೂರ್ಯ</p></div>

ಸಂಸದ ತೇಜಸ್ವಿ ಸೂರ್ಯ

   

ವಿಜಯಪುರ: ಇಂಡಿಯಾ ಮೈತ್ರಿಕೂಟ ಹಾವು ಮತ್ತು ಮುಂಗುಸಿಗಳು ಒಟ್ಟಿಗೆ ಸೇರಿಕೊಂಡು ಮಾಡಿಕೊಂಡ ಮೈತ್ರಿಕೂಟವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಕೂಟದ ಆಮ್‌ ಆದ್ಮಿ ಪಕ್ಷ, ಪಶ್ಚಿಮ ಬಂಗಾಳ ಟಿಎಂಸಿ ಪಕ್ಷ, ಕೇರಳದ ಸಿಪಿಎಂ ಪಕ್ಷಗಳು ದಿನ ಬೆಳಗಾದರೆ ಅವರ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೈಯುತ್ತದೆ, ಆದರೂ ಕಾಂಗ್ರೆಸ್‌ನ ಜೊತೆಗೆ ಮೈತ್ರಿಕೂಟದಲ್ಲಿವೆ ಎಂದರು.

ADVERTISEMENT

ಟಿಎಂಸಿ, ಶಿವಸೇನೆಯವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿಯಾಗಲಿ ಎನ್ನುತ್ತಾರೆ, ಆದರೇ ಕಾಂಗ್ರೆಸ್‌ ಪಕ್ಷದವರೇ, ಅದರಲ್ಲೂ ಸಿದ್ದರಾಮಯ್ಯನವರೇ ಅದನ್ನು ಒಪ್ಪುತ್ತಿಲ್ಲ ಹಾಗೂ ಬೆಂಬಲ ಸೂಚಿಸುತ್ತಿಲ್ಲ. ಹಾವು ಮತ್ತು ಮುಂಗುಸಿಗಳು ಒಟ್ಟಿಗೆ ಇದ್ದರೇ ಸಮ್ಮಿಶ್ರ ಪಡೆಯನ್ನು ಕಟ್ಟಲು ಸಾಧ್ಯವೇ? ಎಂದು ವ್ಯಂಗ್ಯವಾಡಿದರು. 

ಕಾಂಗ್ರೆಸ್‌ ನಾಯಕರ ಮಧ್ಯೆಯೇ ಒಗ್ಗಟ್ಟಿಲ್ಲ ಇನ್ನೂ ಇವರು ದೇಶದ ಒಗ್ಗಟ್ಟು ತರಲು ಹೇಗೆ ಸಾಧ್ಯ? ಎಂದರು.

ಪ್ರಧಾನಿ ಪಟ್ಟಕ್ಕೆ ಟಿಎಂಸಿ, ಶಿವಸೇನೆ ಅವರು ಖರ್ಗೆ ಹೆಸರು ಸೂಚಿಸಿದ್ದ ನಂತರ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಮುಜುಗರಕ್ಕೆ ಒಳಗಾಗಿದ್ದಾರೆ. ಅದಕ್ಕೆ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಮೂಲಕ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿಕೆ‌ ಕೊಡಿಸಿ ಅವರ ಕುಟುಂಬ ಪಾರುಪತ್ಯವನ್ನು ಕಾಂಗ್ರೆಸ್‌ನಲ್ಲಿ ನಿರಂತರವಾಗಿ ಮುಂದುವರೆಸಲು ಪ್ರಯತ್ನ ಮಾಡುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.