ಸಿಂದಗಿ: ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಕೋರಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಬುಧವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಪಾಲ್ಗೊಂಡು, ‘ಉಗ್ರರ ದಾಳಿ ಅತ್ಯಂತ ಹೇಯ ಕೃತ್ಯ’ ಎಂದರು.
ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಪುರಸಭೆ ಸದಸ್ಯರಾದ ಸಾಯಬಣ್ಣ ಪುರದಾಳ, ಅಬ್ದುಲ್ರಹೀಂ ದುದನಿ, ಸದಾಶಿವ ಕುಂಬಾರ, ಸಿದ್ದು ಮಲ್ಲೇದ, ಚನ್ನೂ ಗೋಣಿ, ಕಾಂಗ್ರೆಸ್ ಮುಖಂಡರಾದ ಸುರೇಶ ಮಳಲಿ, ಗಂಗಾಧರ ರುಕುಂಪುರ, ಕುಮಾರ ದೇಸಾಯಿ, ಪ್ರವೀಣ ಕಂಟಿಗೊಂಡ, ನೂರಅಹ್ಮದ ಅತ್ತಾರ, ಜಯಶ್ರೀ ಹದನೂರ, ಸುನಂದಾ ಯಂಪುರೆ, ಶಾರದಾ ಬೆಟಗೇರಿ, ವರ್ಷಾ ಪಾಟೀಲ, ಶಾಂತಪ್ಪ ರಾಣಾಗೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.