ADVERTISEMENT

ವಿಜಯಪುರದಲ್ಲಿ ಅಬ್ಬರದ ಮಳೆ: ಡೋಣಿ ನದಿಯಲ್ಲಿ ಪ್ರವಾಹ ಆತಂಕ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 7:13 IST
Last Updated 5 ಆಗಸ್ಟ್ 2022, 7:13 IST
ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೆ ಅಬ್ಬರದ ಮಳೆ
ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೆ ಅಬ್ಬರದ ಮಳೆ   

ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೆ ಅಬ್ಬರದ ಮಳೆಯಾಗಿದ್ದು, ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಸಾರವಾಡ ಬಳಿ ವಿಜಯಪುರ -ಬಬಲೇಶ್ವರ- ಜಮಖಂಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿ 34 ಪ್ರವಾಹದಲ್ಲಿ ಮುಳುಗುವ ಸಾಧ್ಯತೆ ಇದೆ.

ಹೆದ್ದಾರಿ‌ ಮೇಲೆ ‌ನೀರು ಹರಿಯುತ್ತಿದ್ದು, ವಾಹನಗಳು ಅದರಲ್ಲೇ ಸಂಚರಿಸುತ್ತಿವೆ.

ADVERTISEMENT

ಮತ್ತಷ್ಟು ನೀರು ಏರಿಕೆಯಾದರೆ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ.

ಸಾರವಾಡ ಗ್ರಾಮಕ್ಕೂ ಪ್ರವಾಹದ ಭೀತಿ ಎದುರಾಗಿದೆ. ಇನ್ನೆರೆಡು ಅಡಿ ನೀರು ಹೆಚ್ಚಿದರೆ ಗ್ರಾಮದ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.