ADVERTISEMENT

ಚಾಲಕನ ಸಮಯ ಪ್ರಜ್ಞೆ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:44 IST
Last Updated 13 ಡಿಸೆಂಬರ್ 2013, 7:44 IST

ಸುರಪುರ: ಕುಂಬಾರಪೇಟೆಯ ಇಳಿಜಾರು ಪ್ರದೇಶದಲ್ಲಿ ಬುಧವಾರ ಸಾರಿಗೆ ಸಂಸ್ಥೆಯ ಸುರಪುರ– ಸುಗೂರು ಬಸ್ ಬ್ರೆಕ್ ವೈಫಲ್ಯಕ್ಕೆ ಒಳಗಾಯಿತು. ರಸ್ತೆ ಪಕ್ಕದಲ್ಲಿ ಚರಂಡಿ ಕಾಮಗಾರಿಯಲ್ಲಿ 25ಕ್ಕೂ ಹೆಚ್ಚು ಕಾರ್ಮಿಕರು ತೊಡಗಿಕೊಂಡಿದ್ದರು. ಬಸ್‌ನಲ್ಲಿ 53 ಜನ ಪ್ರಯಾಣಿಕರಿದ್ದರು.

ಈ ಸಂದರ್ಭದಲ್ಲಿ ಚಾಲಕ ಗೊಂದಲಕ್ಕೆ ಒಳಗಾಗದೇ, ಸಮಯ­ಪ್ರಜ್ಞೆ ಮೆರೆದು ಬಸ್‌ನ್ನು ರಸ್ತೆ ಪಕ್ಕದಲ್ಲಿ ಹಾಕಿದ್ದ ಕಂಕರ್ ಸಂಗ್ರಹದ ಮೇಲೆ ತೆಗೆದುಕೊಂಡು ಹೋದರು. ಅದೃಷ್ಟವಶಾತ್ ಕಂಕರ್‌ನಲ್ಲಿ ಬಸ್ ನಿಂತುಕೊಂಡಿತು. ಸ್ವಲ್ಪ ಹೆಚ್ಚು ಕಮ್ಮಿ ಆದರೂ ಕಾರ್ಮಿಕರು ಮತ್ತು ಪ್ರಯಾಣಿಕರು ಅಪಘಾತಕ್ಕೆ ಈಡಾಗುವ ಸಂಭವವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.