ADVERTISEMENT

‘ಸುಸಂಸ್ಕೃತರಾಗದ ಜಾನಪದ ಕಲಾವಿದರು’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 5:43 IST
Last Updated 3 ಡಿಸೆಂಬರ್ 2017, 5:43 IST

ಯಾದಗಿರಿ: ‘ಕಲೆಗಳು ಬುಡಕಟ್ಟು, ಪರಂಪರೆ, ಆಚರಣೆಗಳ ಪ್ರತೀಕವಾಗಿರುತ್ತವೆ. ಕಲೆಗಳಿಗೆ ನೆಲೆಯೊದಗಿಸಿದ ಮೂಲ ಸಂಸ್ಕೃತಿಯನ್ನೂ ಕಾಪಾಡುವ ಹೊಣೆ ಕಲಾವಿದರ ಮೇಲಿದೆ’ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರ ಅಭಿಪ್ರಾಯಪಟ್ಟರು.

ನಗರದ ವಿದ್ಯಾಮಂಗಲ ಸಭಾಂಗಣದಲ್ಲಿ ಶನಿವಾರ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಜಾನಪದ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಚರ್ಮವಾದ್ಯಗಳ ಕಲಾವಿದರ ಸಮಾವೇಶ ಹಾಗೂ ಜಾನಪದ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಾವಿದರು ಸುಸಂಸ್ಕೃತರಾಗುತ್ತಿಲ್ಲ. ಕಲೆಯ ಆರಾಧಕರೆನಿಸಿರುವ ಕಲಾವಿದರು ಕಲಾ ಸಂಸ್ಕೃತಿಗೆ ಬದ್ಧತೆ ಪ್ರದರ್ಶಿಸುತ್ತಿಲ್ಲ. ಹಿಂದೆ ಕಲೆಯನ್ನು ದೈವಿಸ್ವರೂಪವಾಗಿ ಕಾಣಲಾಗುತ್ತಿತ್ತು. ಅದರಂತೆ ಸಮಾಜ ಕಲಾವಿದರನ್ನು ಗೌರವಿಸುತ್ತಿತ್ತು. ಗೌರವಕ್ಕೆ ಪಾತ್ರರಾಗುವ ಕಲಾವಿದರು ಸುಸಂಸ್ಕೃತರಾಗಿರುತ್ತಿದ್ದರು.

ADVERTISEMENT

ಆದರೆ, ಇಂದು ಕಲಾವಿದರು ಹಲವು ದುಶ್ಚಟಗಳ ದಾಸರಾಗುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕಲಾವಿದರನ್ನು ಸಮಾಜದಲ್ಲಿ ಕಡೆಗಣಿಸಲಾಗುತ್ತಿದೆ’ ಎಂದು ವಿಷಾದಿಸಿದರು. ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ್ ಅಂಗಡಿ ಮಾತನಾಡಿ, ‘ಫೆಬ್ರುವರಿಯೊಳಗಾಗಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.