ಗುರುಮಠಕಲ್: -ಸೈದಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸೈದಾಪುರ ವಾಸವಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದ ಛದ್ಮವೇಷದಲ್ಲಿ ರಾಘವೇಂದ್ರ, ಕ್ಲೇ ಮಾಡಲಿಂಗ್ನಲ್ಲಿ ಸುದರ್ಶನ, ಅಭಿನಯ ಗೀತೆಯಲ್ಲಿ ಪವಿತ್ರ, ರಸಪ್ರಶ್ನೆಯಲ್ಲಿ ಅರ್ಚನಾ ಪ್ರಥಮ ಸ್ಥಾನ ಗಳಿಸಿದ್ದಾರೆ. ಧಾರ್ಮಿಕ ಪಠಣದಲ್ಲಿ ಅಬ್ದುಲ್ಲಾ ದ್ವಿತೀಯ ಸ್ಥಾನ, ಕಂಠಪಾಠದಲ್ಲಿ ಅಬ್ದುಲ್ಲಾ, ಚಿತ್ರಕಲೆಯಲ್ಲಿ ಆಂಜನೇಯ ತೃತೀಯ ಸ್ಥಾನ ಪಡೆದಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಧಾರ್ಮಿಕ ಪಠಣದಲ್ಲಿ ಅಲ್ಫಿಯಾ ತಬಸ್ಸುಮ್, ಛದ್ಮವೇಷದಲ್ಲಿ ಬಂದಪ್ಪ, ಜಾನಪದ ನೃತ್ಯದಲ್ಲಿ ಶಿವಕುಮಾರ ಪ್ರಥಮ ಸ್ಥಾನ, ಸಂಸ್ಕೃತದಲ್ಲಿ ಮನೋಜ ದದ್ದಲ, ಚಿತ್ರಕಲೆಯಲ್ಲಿ ಅಶೋಕ, ಯೋಗಾಸನದಲ್ಲಿ ಶಿವರಾಜ ಪಾಟೀಲ, ಕ್ವಿಜ್ನಲ್ಲಿ ಸಂಜನ ದ್ವಿತೀಯ ಸ್ಥಾನ, ಲಘು ಸಂಗೀತದಲ್ಲಿ ಅರ್ಚನಾ, ಅಭಿನಯ ಗೀತೆಯಲ್ಲಿ ಬಸವರಾಜ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಶಿಕ್ಷಕ ಬಸವಲಿಂಗಪ್ಪ ವಡಿಗೇರಕರ್, ಶಿಕ್ಷಕರಾದ ಹಸನವಾಡಿ, ರಾಧಾ, ಭೀಮಣ್ಣ ವಡವಟ್, ಕಾಸಿಂಬಿ, ಬನಶಂಕರ, ಮಲ್ಲಿಕಾರ್ಜುನ ಅರಿಕೇರಕರ್, ತಾಯಮ್ಮ, ಕಾವೇರಿ, ಸರಸ್ವತಿ, ಶೈನಾಜ್ ಬೇಗಂ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.