ADVERTISEMENT

‘ಧರ್ಮಗಳಲ್ಲಿನ ಉತ್ತಮ ಗುಣ ಅಳವಡಿಸಿಕೊಳ್ಳಿ-’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:33 IST
Last Updated 3 ಮಾರ್ಚ್ 2014, 10:33 IST

ಯಾದಗಿರಿ: ಜಗತ್ತಿನಲ್ಲಿ ಅನೇಕ ಧರ್ಮಗಳಿದ್ದು, ಎಲ್ಲ ಧರ್ಮಗಳ ಸಾರ ಒಂದೇ. ವಿವಿಧ ಧರ್ಮಗಳಲ್ಲಿರುವ ಉತ್ತಮ ಅಂಶಗಳನ್ನು ತೆಗೆದುಕೊಂಡು ಶಾಂತಿ, ಸಹೋದರತೆಯಿಂದ ಬಾಳಿ­ದಾಗ ಮಾತ್ರ ಅನೇಕತೆಯಲ್ಲಿ ಏಕತೆ­ಯನ್ನು ಕಾಣಬಹುದು ಎಂದು ಶಾಸಕ ಡಾ.ಎ.ಬಿ.ಮಾಲಕರಡ್ಡಿ ಹೇಳಿದರು.

ಶಹಾಪುರ ತಾಲ್ಲೂಕಿನ ಹಬಸಿಹಾಳ ಗ್ರಾಮದಲ್ಲಿ ಜನಾಬ್‌ ಚಾಂದ್‌ ಪಟೇಲ್ ರಿಲೀಜಿಯಸ್ ಟ್ರಸ್ಟ್‌ ಭಾನು­ವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬೆಂಗಳೂರಿನ ಎಂಬಿಸಿ ಗ್ರೂಪ್‌ನ ಅನುದಾನದಲ್ಲಿ ನಿರ್ಮಿಸಿದ ಜಾಮಿಯಾ ಮಸ್ಜೀದ್‌ -ಎ -ಬಿಲಾಲ್ ಉದ್ಘಾಟನೆ ಹಾಗೂ ಮುಸ್ಲಿಂ ಬಾಂಧವರ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.

ಪ್ರೀತಿ, ಪ್ರೇಮ, ಸಹನೆ ಎಂಬ ಮೂರು ಅಮೂಲ್ಯ ರತ್ನಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ­ಕೊಳ್ಳಬೇಕು. ಆಗ ಮಾತ್ರ ಸಮಾಜ­ದಲ್ಲಿ ಭಾವೈಕ್ಯ ಹಾಗೂ ದೇಶದ ಪ್ರಗತಿಗೆ ಸಹಕಾರಿ ಆಗಲಿದೆ ಎಂದರು.

ಈ ಮಸೀದಿ ಎಲ್ಲರ ಆಸ್ತಿ. ಇದನ್ನು ಪ್ರತಿಯೊಬ್ಬರು ತನ್ನದೆಂದು ತಿಳಿಯ­ಬೇಕು. ಈ ಮಸೀದಿಗೆ ಸುಮಾರು ₨50 ಲಕ್ಷ ದೇಣಿಗೆಯಾಗಿ ಕೊಟ್ಟ ಎಂಬಿಸಿ ಗ್ರೂಪ್‌ ಅಧ್ಯಕ್ಷರ ಕಾರ್ಯ ಶ್ಲಾಘ­ನೀಯ. ಇಂಥವರಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಿದರೆ, ಇನ್ನೂ ಹೆಚ್ಚಿನ ಸಮಾಜ ಕಾರ್ಯಗಳನ್ನು ನಿರೀಕ್ಷಿಸ­ಬಹುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.