ಚಿಂಚೋಳಿ: ತಾಲ್ಲೂಕಿನ ಹೂಡದಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಮಕ್ಕಳಿಬ್ಬರನ್ನು ಬಾವಿಗೆ ಎಸೆದು ತಂದೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ರಂಗಯ್ಯ ನಾಗಯ್ಯ ಗುತ್ತೇದಾರ (30), ಶಿವಕುಮಾರ (5), ಶ್ರೀಕಾಂತ (2) ಮೃತರು. ಪತ್ನಿಯೊಂದಿಗೆ ಜಗಳವಾಡಿದ ರಂಗಯ್ಯ ಮಕ್ಕಳೊಂದಿಗೆ ಹೊಲಕ್ಕೆ ತೆರಳಿದ್ದಾರೆ.
ಮಕ್ಕಳಿಬ್ಬರಿಗೆ ಕಲ್ಲುಕಟ್ಟಿ ಬಾವಿಗೆ ಹಾಕಿ ಅರ್ಧ ಕಿ.ಮೀ ದೂರದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಬಾವಿಯಲ್ಲಿ ಹುಡುಕಾಟ ಆರಂಭಿಸಿದ ಕೆಲ ಹೊತ್ತಿನಲ್ಲೇ ಶ್ರೀಕಾಂತನ ಶವ ಪತ್ತೆಯಾದರೆ, ಶಿವಕುಮಾರ ಶವ ರಾತ್ರಿ ಪತ್ತೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.