ಯಾದಗಿರಿ: ಅಪರಿಚಿತ ವಾಹನ ಡಿಕ್ಕಿಯಾಗಿ ಅಬ್ಬೆತುಮಕೂರು ಗ್ರಾಮದ ತಾಯಿ, ಮಗ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಹೊಸಳ್ಳಿ ಕ್ರಾಸ್ ಸಮೀಪ ಶನಿವಾರ ನಡೆದಿದೆ.
ತಾಯಿ ಕಮಲಮ್ಮ (46), ಮಗ ಬಾಪುಗೌಡ ದಿಡ್ಡಿಮನಿ (28) ಸಾವನ್ನಪ್ಪಿದ್ದಾರೆ.ತಾಲ್ಲೂಕಿನ ಅಬ್ಬೆತುಮಕೂರು ಗ್ರಾಮದ ನಿವಾಸಿಗಳು, ನಗರದ ಸಹರಾ ಕಾಲೊನಿಯಲ್ಲಿ ವಾಸವಾಗಿದ್ದರು.
ಹೊಸಳ್ಳಿ ಗ್ರಾಮದ ತವರು ಮನೆಯವರು ಜಾನುವಾರುಗಳನ್ನು ಸಾಕಿ ಹೈನುಗಾರಿಕೆ ಮಾಡುತ್ತಿದ್ದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ತವರು ಮನೆಯವರು ಊರಿಗೆ ತೆರಳಿದ್ದರು. ಹೀಗಾಗಿ ಹಾಲು ಕರೆಯಲು ಮಗನೊಂದಿಗೆ ಬೈಕ್ ಮೇಲೆ ತಾಯಿ ಕಮಲಮ್ಮ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಸ್ಥಳದಲ್ಲಿಯೇ ತಾಯಿ ಸಾವನ್ನಪ್ಪಿದ್ದರೆ, ಮಗ ಬಾಪುಗೌಡ ಚಿಕಿತ್ಸೆಗೆ ಸ್ಪಂದಿಸದೇ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಪ್ರಜಾವಾಣಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.