ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದೆ.
ನಗರದ ಚಿತ್ತಾಪುರ ರಸ್ತೆಯಲ್ಲಿ ಮಳೆ ನೀರು ನಿಂತು ಆವಾಂತರ ಸೃಷ್ಟಿಯಾಗಿತ್ತು. ಸ್ಟೇಷನ್ ರಸ್ತೆಯಲ್ಲಿ ಮಳೆಯಿಂದ ನೀರು ರಸ್ತೆ ಮೇಲೆ ನಿಂತಿತು. ಗಾಂಧಿ ವೃತ್ತದ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಬಿಸಿಲಿನ ಬೇಗೆಯಿಂದ ನರಳುತ್ತಿದ್ದ ಜನತೆಗೆ ಮಳೆಯ ನಂತರ ತಂಪಿನ ಅನುಭವಾಯಿತು.
ಸುರಪುರ, ಸೈದಾಪುರ, ವಡಗೇರಾ, ಯರಗೋಳ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಬೆಳಿಗ್ಗೆಯಿಂದ ಪ್ರಖರ ಬಿಸಿಲಿನ ವಾತಾರವಣ ಇತ್ತು. ಸಂಜೆ ವೇಳೆಗೆ ಬಿರುಗಾಳಿ ಬೀಸಿದ ನಂತರ ಮಳೆಯಾಯಿತು.
ಗ್ರಾಮೀಣ ಭಾಗದಲ್ಲಿ ಮುಂಗಾರು ಬಿತ್ತನೆಗೆ ಸಿದ್ಧತೆಯಲ್ಲಿ ತೊಡಗಿದ್ದು, ಮಳೆಯೂ ಭೂಮಿಗೆ ತಂಪನ್ನು ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.