ಹುಣಸಗಿ: ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ಜನ್ಮ ತಾಳಿತ ಪಾವನ ನೆಲದಲ್ಲಿ ಇರುವ ಇಂದಿನ ಜನತೆ ಪುಣ್ಯವಂತರು ಎಂದು ಹಿರೇಮಠದ ಶ್ರೀಗಿರಿಧರ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಮುದನೂರು ಗ್ರಾಮದ ದಾಸಿಮಯ್ಯ ಅವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಅವರು ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಖಂಡ ಬಸನಗೌಡ ಮಾಲಿಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಸನ್ನಿಗೌಡ ಪಾಟೀಲ, ಚನ್ನಯ್ಯ ಹಿರೇಮಠ, ಮಾಂತಯ್ಯ ಸ್ಥಾವರಮಠ, ಮಾಣಿಕರಾವ್ ಕುಲಕರ್ಣಿ, ಬಸನಗೌಡ ಗೌಡಪ್ಪಗೋಳ, ಸುಭಾಸ, ಚಂದ್ರರಡ್ಡಿ ಪಡೇಕನೂರು, ಹೊನ್ನಪ್ಪಗೌಡ ಮೇಟಿ, ಶಿವರಡ್ಡಿ ಯಡಿಹಳ್ಳಿ, ಮಲ್ಲಿನಾಥ ಸೊನ್ನದ, ರಾಮನಗೌಡ ಅಲ್ಲಿಪುರ, ಮಲ್ಲನಗೌಡ ನಗನೂರು ಸೇರಿದಂತೆ ಇತರರು ಇದ್ದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ದೇವರ ದಾಸಿಮ್ಯಯ ಅವರ ಜಯಂತಿ ಆಚರಿಸಲಾಯಿತು. ಉಪನ್ಯಾಸಕಿ ಅಕ್ಕಮಹಾದೇವಿ ದೇಶಮುಖ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.