ADVERTISEMENT

ತುರಕನದೊಡ್ಡಿ: ಹಾವು ಕಚ್ಚಿ ರೈತ ಸಾವು

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 4:14 IST
Last Updated 25 ಜುಲೈ 2021, 4:14 IST
ಖತಲ ಅಹ್ಮದ್
ಖತಲ ಅಹ್ಮದ್   

ಸೈದಾಪುರ: ಸಮೀಪದ ತುರಕನದೊಡ್ಡಿ ಗ್ರಾಮದ ರೈತ ಖತಲ ಅಹ್ಮದ್ (35) ಹಾವು ಕಚ್ಚಿದ್ದರಿಂದ ಶನಿವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ತಮ್ಮ ಜಮೀನಿನಲ್ಲಿ ಶೇಂಗಾ ಬೆಳೆಯನ್ನು ಕಾಯಲು ಹೋದಾಗ ಬೆಳಿಗ್ಗೆ 5ರ ಸುಮಾರು ಅವರ ಎಡಗೈಗೆ ಹಾವು ಕಚ್ಚಿದೆ. ಖಾಸಗಿ ವಾಹನದಲ್ಲಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.