ADVERTISEMENT

ಸುರಪುರ ತಾಲ್ಲೂಕಿನ ದೇವಿಕೇರಾದಲ್ಲಿ ಬೆಂಕಿಗೆ ಮನೆ ಆಹುತಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 15:55 IST
Last Updated 19 ಆಗಸ್ಟ್ 2020, 15:55 IST

ಸುರಪುರ: ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಬುಧವಾರ ಶಾರ್ಟ್ ಸರ್ಕಿಟ್‍ನಿಂದ ಮನೆ ಬೆಂಕಿಗೆ ಆಹುತಿಯಾಗಿದೆ.

ಮನೆಯಲ್ಲಿಟ್ಟಿದ್ದ 5 ತೊಲೆ ಬಂಗಾರ, ಅರ್ಧ ಕೆ.ಜಿ ಬೆಳ್ಳಿ, 8.50 ಲಕ್ಷ ನಗದು ಹಣ ಹಾಗೂ ದವಸ ಧಾನ್ಯ ಬಟ್ಟೆ ಬರೆ ಸೇರಿದಂತೆ ದಿನಬಳಕೆ ಅಗತ್ಯ ಸಾಮಗ್ರಿಗಳು ಸುಟ್ಟು ಕರಕಲಾಗಿ ಹೋಗಿವೆ.

ಮನೆಯ ಮಾಲೀಕ ಇಮಾಮಸಾಬ ದಾವಲಸಾಬ ದೊಡ್ಮನಿ ಮನೆಗೆ ಕೀಲಿ ಹಾಕಿಕೊಂಡು ಕುಟುಂಬ ಸಮೇತ ಹೊಲಕ್ಕೆ ಹೋಗಿದ್ದರು. ಮನೆಯಲ್ಲಿ ಯಾರು ಇರಲಿಲ್ಲ. ಆ ಸಮಯದಲ್ಲಿ ಶಾರ್ಟ್ ಸರ್ಕಿಟ್‍ನಿಂದ ಮನೆಗೆ ಬೆಂಕಿ ತಗಲಿದೆ ಎನ್ನಲಾಗಿದೆ.

ADVERTISEMENT

10 ಕ್ವಿಂಟಾಲ್ ಜೋಳ, 2 ಚೀಲ ಸಜ್ಜಿ, 6 ಚೀಲ ಅಕ್ಕಿ, ಗೋಧಿ ಎಲ್ಲವು ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಗ್ರೇಡ್ 2 ತಹಶೀಲ್ದಾರ್ ಸೋಫಿಯಾ ಸುಲ್ತಾನ, ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.