ADVERTISEMENT

ಗಣೇಶೋತ್ಸವ ಇಂದು ನಿರ್ಧಾರ; ಶಹಾಪುರದಲ್ಲಿ ಸಹಕಾರ ಸಚಿವ ಸೋಮಶೇಖರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 7:12 IST
Last Updated 5 ಸೆಪ್ಟೆಂಬರ್ 2021, 7:12 IST

ಯಾದಗಿರಿ: ‘ಗಣೇಶೋತ್ಸವ ಭಾವನಾತ್ಮಕ ಸಂಬಂಧವಾಗಿದೆ. ಅದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತ ಅಲ್ಲ. ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

‘ಈ ಕುರಿತು ಕಳೆದ ವಾರವೂ ಒಂದು ಸಭೆ ನಡೆದಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಣೇಶೋತ್ಸವ ಎಲ್ಲೆಲ್ಲಿ ಎಷ್ಟು ದಿನ ಆಚರಣೆ ಮಾಡಬೇಕು ಎಂದು ಮಾಹಿತಿ ಕೊಟ್ಟಿದ್ದಾರೆ. ತಜ್ಞರ ಸಮಿತಿ ಜತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಚರ್ಚಿಸಿ, ಗಣೇಶೋತ್ಸವಕ್ಕೆ ಅವಕಾಶ ಕೊಡುತ್ತಾರೆ’ ಎಂದು ಶಹಾಪುರ ಎಪಿಎಂಸಿ ಆವರಣದಲ್ಲಿ ತಿಳಿಸಿದರು.

ಮೈಸೂರಿನ ವಸತಿ ನಿಯಲದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಅತ್ಯಾಚಾರ ನಡೆದಿಲ್ಲ. ಅವರಿಬ್ಬರು ಸ್ನೇಹಿತರೇ. ಅವರಿಬ್ಬರು ನಾಟಕವಾಡುತ್ತಿದ್ದರು. ಪೊಲೀಸರು ಆಕ್ಷನ್ ಮಾಡಿದಾಗ ಆಗ ಗೊತ್ತಾಗಿದೆ. ಅತ್ಯಾಚಾರನೂ ಇಲ್ಲ ಏನೂ ಇಲ್ಲ’ ಎಂದರು.

ADVERTISEMENT

‘ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಒಂದು ಬಾರಿ ಜಾಸ್ತಿ, ಒಂದು ಬಾರಿ ಕಡಿಮೆ ಆಗುತ್ತದೆ. ಕೇಂದ್ರ ಸರ್ಕಾರ ಸಮತೋಲನ ಮಾಡಲು ಕೆಲಸ ಮಾಡುತ್ತದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.