ಕೆಂಭಾವಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಗ್ರಾಮ ದೇವತೆಗೆ ದೀಡ್ ನಮಸ್ಕಾರ ಹಾಕುತ್ತೇನೆ ಎಂದು ಹರಿಸಿಕೊಂಡಿದ್ದ ಸಮೀಪ ಮುದನೂರ ಗ್ರಾಮದ ಮೋದಿಯ ಕಟ್ಟಾ ಅಭಿಮಾನಿ ಹಣಮಂತರೆಡ್ಡಿ ಕರಡಕಲ್ ಗುರುವಾರ ಬಿಜೆಪಿ ಗೆಲ್ಲುತ್ತಿದ್ದಂತೆಯೆ ಬಿರು ಬಿಸಿಲನ್ನು ಲೆಕ್ಕಿಸದೆ ತಮ್ಮ ಮನೆಯಿಂದ ಗ್ರಾಮದೇವತೆ ದೇವಸ್ಥಾನದವರೆಗೆ ದೀಡ್ನಮಸ್ಕಾರ ಹಾಕಿ ಹರಕೆ ಪೂರೈಸಿದರು.
ನಂತರ ಮಾತನಾಡಿದ ಅವರು, ಸದೃಢ ದೇಶಕ್ಕಾಗಿ ಮೋದಿಯವರ ಅವಶ್ಯಕತೆ ಇದೆ. ಭ್ರಷ್ಟಾಚಾರ ರಹಿತ, ಕಳಂಕ ರಹಿತ ವ್ಯಕ್ತಿಯಿಂದ ಮಾತ್ರ ದೇಶದ ಉದ್ಧಾರ ಸಾಧ್ಯ. ಮೋದಿ ತಮಗಾಗಿ ಏನೂ ಮಾಡದೆ ದೇಶದ ಹಿತಕ್ಕಾಗಿ ಹಗಲಿರುಳು ದಣಿವರಿಯದೆ ದುಡಿಯುತ್ತಾರೆ. ಅಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು. ಅವರ ಸೇವೆ ನಿರಂತರವಾಗಿ ನಡೆಯಲಿ ಎಂದು ನಾನು ಬಯಸಿ ಹರಕೆ ಹೊತ್ತಿದ್ದೆ. ನನ್ನ ಹರಕೆಯಂತೆ ಮತ್ತೆ ಅವರು ಪ್ರಧಾನಿಯಾಗಿರುವಕ್ಕೆ ಸಂತಸಕ್ಕೆ ಪಾರವೆ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿವಾರದವರು ಹಾಗೂ ಸ್ನೇಹಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.