ADVERTISEMENT

ಯಾದಗಿರಿ: ಸಿಡಿಲಿಗೆ ಕೊಟ್ಟಿಗೆಯಲ್ಲಿದ್ದ ಎತ್ತು, ಆಕಳ, ಎಮ್ಮೆ ಸಾವು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 5:51 IST
Last Updated 12 ಅಕ್ಟೋಬರ್ 2022, 5:51 IST
ಜಾನುವಾರುಗಳು ಮೃತಪಟ್ಟಿರುವ ದೃಶ್ಯ
ಜಾನುವಾರುಗಳು ಮೃತಪಟ್ಟಿರುವ ದೃಶ್ಯ   

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳ ಗ್ರಾಮದ ಕೊಟ್ಟಿಯಲ್ಲಿದ್ದ ಎರಡು ಎತ್ತು, ಆಕಳು, ಎಮ್ಮೆ ಸಿಡಿಲು ಬಡಿತಕ್ಕೆ ಸಾವನ್ನಪ್ಪಿವೆ.

ಭೀಮರಾಯ ಹಣಮಂತರಾಯ ಅವರಿಗೆ ಸೇರಿದ ಜಾನುವಾರು ಬುಧವಾರ ಬೆಳಗಿನ ಜಾವ 1 ಗಂಟೆ ಸಿಡಿಲಾಘಾತಕ್ಕೆ ಸಾವನ್ನಪ್ಪಿವೆ. ನಾಲ್ಕು ಜಾನುವಾರು ಅಂದಾಜು ₹2 ಲಕ್ಷ ಮೌಲ್ಯ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ: ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ. ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಎರಡರಿಂದ ಮೂರು ಗಂಟೆ ಕಾಲ ಮಳೆಯಾಗಿದೆ. ಇದರಿಂದ ಕೆಲ ಜಮೀನುಗಳಲ್ಲಿ ನೀರು ನಿಂತಿವೆ.

ಹತ್ತಿ ಬೆಳೆಗೆ ರೋಗ:ಅಧಿಕ ಮಳೆಯಿಂದ ಹತ್ತಿ ಬೆಳೆ ರೋಗ ಬಾಧೆಗೆ ತುತ್ತಾಗುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.