ಯಾದಗಿರಿ:ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದುಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
ಜಾತ್ಯತೀತ ಜನತಾ ದಳ ಜಿಲ್ಲಾ ಕಚೇರಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣನೆರವೇರಿಸಿ ಅವರು ಮಾತನಾಡಿದರು.
ಕೊರೊನಾಸೋಂಕು ಎಲ್ಲ ಕಡೆಯೂ ಹಬ್ಬಿದ್ದು, ಸಾರ್ವಜನಿಕರು ಜಾಗರೂಕರಾಗಿ ನಡೆದುಕೊಳ್ಳಬೇಕಿದೆ. ಮಾಸ್ಕ್ ಧರಿಸಬೇಕು. ಆಗಾಗ ಕೈಗಳಿಗಳಿಗೆ ಸ್ಯಾನಿಟೈಸ್ ಹಾಕಿಕೊಳ್ಳಬೇಕು. ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಬೇಕುಎಂದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಗರಾಧ್ಯಕ್ಷ ವಿಶ್ವನಾಥ ಸಿರವಾರ, ನಾಗರತ್ನಾ ಅನಪುರ, ದಂಡಪ್ಪಗೌಡ ಉಳ್ಳೆಸುಗೂರು, ಶರಣಪ್ಪ ಗುಳಗಿ, ಬಾಲಪ್ಪ ಚಿಕ್ಕಮೇಟಿ, ಶಿವಪ್ಪ ಮುಷ್ಟೂರು, ಮಲ್ಲಿಕಾರ್ಜುನ ಮೇಟಿ, ಮಲ್ಲಿಕಾರ್ಜುನಗೌಡ ಬೀರನಕಲ್, ರಫೀಕ್ ಪಟೇಲ್ ಉಳ್ಳೆಸುಗೂರು, ಬಂದಪ್ಪ ಅರಳಿ, ಶರಣು ಪಡಶೆಟ್ಟಿ, ಅಬ್ದುಲ್ ಖಯ್ಯುಂ ಇನಾಂದಾರ, ರಾಜಶೇಖರ ದೊರಿ, ಯಂಕಪ್ಪ ಗೋಸಿ, ರಾಜಕುಮಾರ ಸಾಹುಕಾರ ಖಾನಾಪೂರ, ಮಹೇಶಗೌಡ ನಾಯಕ ಬೀರನಕಲ್, ಮಾಣಿಕಪ್ರಭು, ಶರಣು ಪೂಜಾರಿ, ವಿಶ್ವನಾಥ ಮಾಲಿಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.