ADVERTISEMENT

ಪರಿಸರ ಸ್ವಚ್ಚತೆಯಲ್ಲಿ ನಾಗರಿಕರ ಪಾತ್ರ ಮುಖ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 15:45 IST
Last Updated 14 ಅಕ್ಟೋಬರ್ 2019, 15:45 IST
ಯಾದಗಿರಿಯ ಬಸವಯೋಗ ಟ್ರಸ್ಟ್‌ನಿಂದ ಮಾತಾ ಮಾಣಿಕೇಶ್ವರಿ ನಗರದ ಉದ್ಯಾನವನ ಹಾಗೂ ಪ್ರಮುಖ ರಸ್ತೆಯಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಯಾದಗಿರಿಯ ಬಸವಯೋಗ ಟ್ರಸ್ಟ್‌ನಿಂದ ಮಾತಾ ಮಾಣಿಕೇಶ್ವರಿ ನಗರದ ಉದ್ಯಾನವನ ಹಾಗೂ ಪ್ರಮುಖ ರಸ್ತೆಯಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು   

ಯಾದಗಿರಿ: ಪ್ರಸಕ್ತ ದಿನಗಳಲ್ಲಿ ನಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ನಾವೂ ವಾಸಿಸುವ ಪರಿಸರ ಸ್ವಚ್ಛತೆಗೆ ಒತ್ತು ನೀಡಬೇಕು. ಇದರಲ್ಲಿ ನಾಗರಿಕರ ಸಹಕಾರ ಕೂಡ ಮುಖ್ಯವಾಗಿದೆ ಎಂದು ವೈದ್ಯ ಡಾ.ಸಿ.ಎಂಪಾಟೀಲ ಹೇಳಿದರು.

ನಗರದ ಬಸವಯೋಗ ಟ್ರಸ್ಟ್‌ ವತಿಯಿಂದ ಮಾತಾ ಮಾಣಿಕೇಶ್ವರಿ ನಗರದ ಉದ್ಯಾನವನ ಹಾಗೂ ಪ್ರಮುಖ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಬೆಳವಣಿಗೆಯಲ್ಲಿ ಪರಿಸರದ ಸಹಕಾರ ಬಹಳ ಮುಖ್ಯವಾಗಿದೆ. ಪರಿಸರ ಸ್ವಚ್ಛತೆ ಹಾಗೂ ರಕ್ಷಣೆ ಮಾಡುವುದು ನಮ್ಮೆಲ್ಲರ ಜಾವಬ್ದಾರಿಯಾಗಿದೆ. ಇದರಿಂದ ಆರೋಗ್ಯಕರ ವಾತವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಟ್ರಸ್ಟ್‌ನ ಮುಖ್ಯಸ್ಥ, ಯೋಗಗುರು ಸೋಮನಾಥರೆಡ್ಡಿ ಯಲ್ಹೇರಿ ಮಾತನಾಡಿ, ನಾವು ದಿನಾಲೂ ಜನರಿಗೆ ಉಚಿತ ಯೋಗ ಅಭ್ಯಾಸ ಮಾಡಿಸುವ ಜೊತೆಗೆ ಶುದ್ಧ ವಾತಾವರಣ ನಿರ್ಮಾಣ ಮಾಡಲು ಸಮಾನ ಮನಸ್ಕರ ತಂಡದೊಂದಿಗೆ ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಲಲಿತಾ ಅನಪುರ ಮಾತನಾಡಿ, ಯೋಗ ತಂಡವು ನಗರದಲ್ಲಿ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸ್ವಯಂ ಕಾರ್ಯದಲ್ಲಿ ತೊಡಗಿರುವುದು ಇತರರಿಗೆ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಹೇಬಗೌಡ ಯಡ್ಡಳ್ಳಿ, ಡಾ.ವೀರಭದ್ರಪ್ಪ ಯಲ್ಹೇರಿ, ಶಂಕರರೆಡ್ಡಿ ಗುಂಜನೂರ, ಪಿಎಸ್‍ಐ ಪ್ರಕಾಶ, ಯಾಮರೆಡ್ಡಿ ಮುಂಡಾಸ, ಸುರೇಶ, ಜ್ಯೋತಿ, ಮಲ್ಲಿಕಾರ್ಜುನರೆಡ್ಡಿ ಬಿಳ್ಹಾರ, ಎಂ.ವೆಂಕಟೇಶ, ರಾಮ ಮೋಹನ, ಶಾಂತಯ್ಯ ಹಿರೇಮಠ ಸೇರಿದಂತೆ ಇತರರು ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.