ಯಾದಗಿರಿ: ನಗರದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡಿ ಶಾಲೆಗೆ ಸ್ವಾಗತಿಸಲಾಯಿತುದರು. ಸಿಹಿ ತಿಂಡಿ ಸವಿದು ಕಲಿಕಾ ಚೇತರಿಕೆ ನೂತನ ವರ್ಷದ ಸಂಭ್ರಮ ಮತ್ತು ಸಂತಸದಲ್ಲಿ ತೇಲಾಡಿದರು.
ಯಾದಗಿರಿ ವಲಯ ಶಿಕ್ಷಣ ಸಂಯೋಜಕ ಶರಣಗೌಡ ಮಾತನಾಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ರವಿಚಂದ್ರ ನಾಯ್ಕಲ್ ‘ಮಳೆಬಿಲ್ಲು’ ಕಾರ್ಯಕ್ರಮದಲ್ಲಿನ ಮೊದಲನೆಯ ದಿನದ ಚಟುವಟಿಕೆಗಳು ಮಕ್ಕಳೊಂದಿಗೆ ಮಾಡಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ನಂತರ ಪ್ರತಿಯೊಬ್ಬ ಮಕ್ಕಳಿಗೆ ಹೂ ಗುಚ್ಛಗಳನ್ನು ನೀಡಿ, ಶಿಕ್ಷಕರು ಮಕ್ಕಳನ್ನು ಆಯಾ ತರಗತಿಗಳಿಗೆ ವಿಶೇಷವಾಗಿ ಬರಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.