ಯಾದಗಿರಿ: ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುನಿತಾ ಚವ್ಹಾಣ್ ಅವರು ನೇಮಕವಾಗಿದ್ದು, ಸಮಾಜದ ಮುಖಂಡರು ಸನ್ಮಾನಿಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಹಾಗೂ ಕಾರ್ಯಾಧ್ಯಕ್ಷ ಮಾನ್ಸಿಂಗ್ ಚವ್ಹಾಣ ಆದೇಶ ಹೊರಡಿಸಿಕೊಂಡಿದ್ದಾರೆ.
ಜಿಲ್ಲೆಯ ಸಮಾಜದ ಹಿರಿಯ ಮುಖಂಡ ಪರಶುರಾಮ ಚವ್ಹಾಣ ನೇತೃತ್ವದಲ್ಲಿ ಮುಖಂಡರು ಸುನಿತಾ ಚವ್ಹಾಣ್ ಅವರಿಗೆ ನೇಮಕ ಆದೇಶ ಪ್ರತಿಯನ್ನು ನೀಡಿದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಾಷು ರಾಠೋಡ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಗೋರಿಬಾಯಿ, ಸುರೇಶ ರಾಠೋಡ್ ಮುದ್ನಾಳ ತಾಂಡಾ, ಯಂಕಪ್ಪ ರಾಠೋಡ್, ಪ್ರೇಮಕುಮಾರ ಚವ್ಹಾಣ, ವಿಜಯ ರಾಠೋಡ್, ರಾಮು ರಾಠೋಡ್, ರಮೇಶ ಬದ್ದೇಪಲ್ಲಿ, ರುಕ್ಮಿಣಿಬಾಯಿ, ಸಕ್ಕುಬಾಯಿ ಜಾಧವ್, ರವಿ ಕೆ. ಮುದ್ನಾಳ, ಶರಣು ಚವ್ಹಾಣ, ವಿಜಯ ಹೊಸಳ್ಳಿ, ಶಂಕುಂತಲಾ ಜಾಧವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.