ADVERTISEMENT

ದಂಪತಿ ಸಾವಿಗೆ ಮರುಗಿದ ಜನ

ಬಟ್ಟೆ ಅಂಗಡಿಯಲ್ಲಿ ಬೆಂಕಿ ಅವಘಡ; ವ್ಯಾಪಾರಿ ದಂಪತಿ ಸಾವು

ಮಲ್ಲಿಕಾರ್ಜುನ ಅರಿಕೇರಕರ್
Published 28 ಮಾರ್ಚ್ 2023, 6:36 IST
Last Updated 28 ಮಾರ್ಚ್ 2023, 6:36 IST
ಮಕ್ಕಳೊಂದಿಗೆ ದಂಪತಿ
ಮಕ್ಕಳೊಂದಿಗೆ ದಂಪತಿ   

ಸೈದಾಪುರ: ಬಟ್ಟೆ ವ್ಯಾಪಾರ ಮಾಡಿ ಜೀವನ ಸಾಗಿಸಿ ನೂರಾರು ಜನರಿಗೆ ಕೆಲಸ ಕೊಟ್ಟಿದ್ದ ರಾಘವೇಂದ್ರ ಅಯ್ಯ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಅವರ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ.

ಭಾನುವಾರ ಎಂದಿನಂತೆ ಬಟ್ಟೆ ವ್ಯಾಪಾರ ಮುಗಿಸಿಕೊಂಡು ಅಂಗಡಿ ಬಂದ್‌ ಮಾಡಿ ಕುಟುಂಬದ ಜತೆಗೆ ಕುಳಿತು ಊಟ ಮಾಡಿದ್ದರು. ಅಂಗಡಿಯ ಮೇಲಿನ ಮಹಡಿಯಲ್ಲಿ ಮಲಗಿದ್ದರು. ಆದರೆ, ಬೆಳಗಾಗುವಷ್ಟರಲ್ಲಿ ಅಗ್ನಿ ಅವ ಘಡ ಸಂಭವಿಸಿ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಶಿಲ್ಪಾ ಸಹ ಉಸಿರು ನಿಲ್ಲಿಸಿದ್ದಾರೆ.

ರಾಘವೇಂದ್ರ ದಂಪತಿಯ ಸಾವಿಗೆ ಸೈದಾಪುರ ಸೇರಿ ಸುತ್ತಮುತ್ತಲಿನ ಗ್ರಾಮ ಸ್ಥರು ಕಂಬನಿ ಮಿಡಿದಿದ್ದಾರೆ.

ADVERTISEMENT

ಪಟ್ಟಣದಲ್ಲಿ ಬೆಂಕಿ ಅವಘಡ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಜನ ಸ್ಥಳಕ್ಕೆ ಗುಂಪು ಗುಂಪಾಗಿ ಬಂದರು. ಸಾರ್ವಜನಿಕರೇ ಮೃತ ದೇಹಗಳನ್ನು ಜೆಸಿಬಿ ಮೂಲಕ ಹೊರ ತೆಗೆದರು. ಈ ವೇಳೆ ಕುಟುಂಬಸ್ಥರ ಮತ್ತು ಪಟ್ಟಣದ ಜನರ ಆಕ್ರಂದನ ಮುಗಿಲು ಮುಟ್ಟಿತ್ತು.

ತಂದೆ–ತಾಯಿ ಸಾವಿನಿಂದಾಗಿ 10 ವರ್ಷದ ರುಶಿಲ್ ಹಾಗೂ 8 ವರ್ಷದ ವೇದಾಂಶ ಅನಾಥವಾಗಿದ್ದಾರೆ.

ಅಘೋಷಿತ ಬಂದ್: ರಾಘವೇಂದ್ರ ದಂಪತಿ ಸಾವಿನ ಸುದ್ದಿ ತಿಳಿದು ಪಟ್ಟಣದ ಎಲ್ಲ ವ್ಯಾಪಾರಿಗಳು ಸ್ವಇಚ್ಛೆಯಿಂದ ಅಂಗಡಿ–ಮುಂಗಟ್ಟು ಬಂದ್ ಮಾಡಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.